ಚಿಗಟೇರಿ ಶ್ರೀ ನಾರದಮುನಿ ರಥೋತ್ಸವ ರದ್ದು

ದಾವಣಗೆರೆ,ಏ. 25 – ಹರಪನಹಳ್ಳಿ ತಾಲ್ಲೂಕು ಚಿಗಟೇರಿಯ ಇತಿಹಾಸ ಪ್ರಸಿದ್ಧ ಶ್ರೀ ನಾರದಮುನಿ ರಥೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಹೋಟೆಲ್ ಉದ್ಯಮಿಯೂ ಆಗಿರುವ ಶ್ರೀ ನಾರದಮುನಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದ್ದಾರೆ.

ಬರುವ ಮೇ 1ರ ಶನಿವಾರದಂದು ರಥೋತ್ಸವ ನಡೆಯಬೇಕಾಗಿತ್ತು. ರಾಜ್ಯ ಸರಕಾರದ ಕೋವಿಡ್-19ರ ನಿಯಮಾವಳಿಗಳನ್ನು ಅನುಸರಿಸಬೇಕಾಗಿರುವುದರಿಂದ ಸೇವಾ ಟ್ರಸ್ಟ್‌ನ ಸರ್ವ ಸದಸ್ಯರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ .

ಅಂದು ಭಕ್ತರಿಗೆ ದೇವಾಲಯದ ಪ್ರವೇಶವನ್ನು ನಿಷೇಧಿಸಲಾಗಿದೆ. ಆದುದರಿಂದ ಭಕ್ತರು ಚಿಗಟೇರಿಗೆ ಆಗಮಿಸಬಾರದು ಎಂದು ಟ್ರಸ್ಟ್‌ನ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. 

error: Content is protected !!