ನಗರಸಭೆ ಘಟನೆಯಲ್ಲಿ ಸಚಿವ ಶಂಕರ್ ಕುಮ್ಮಕ್ಕು ಇಲ್ಲ

ರಾಣೇಬೆನ್ನೂರು ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ

ರಾಣೇಬೆನ್ನೂರು, ಫೆ.17- ನಿನ್ನೆ ನಗರಸಭೆಯಲ್ಲಿ ನಡೆದ ಘಟನೆ ಸಚಿವ ಆರ್. ಶಂಕರ ಹೇಳಿ ಮಾಡಿಸಿದ್ದಲ್ಲ ಎಂದು ಹೇಳಿದ  ನಗರಸಭೆ ಸದಸ್ಯ ನಾಗರಾಜ ಪವಾರ್‌  ಹೇಳಿಕೆಗೆ ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ ದನಿಗೂಡಿಸಿದ್ದಾರೆ.

ಮೇಲ್ಕಂಡ ಘಟನೆ ಕುರಿತಂತೆ ನಗರಾಧ್ಯಕ್ಷರು ತಮ್ಮ ಕೊಠಡಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದರು.

ನಿನ್ನೆ ನಗರಸಭೆಯಲ್ಲಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸದಸ್ಯ ನಿಂಗರಾಜ ಕೋಡಿಹಳ್ಳಿ ಅವರು ಅಭಿವೃದ್ಧಿ ಕಾಮಗಾರಿಗಳಲ್ಲಿ ಶಾಸಕರು ಎಲ್ಲ ಸದಸ್ಯರನ್ನು ಸಮನಾಗಿ ಕಾಣುತ್ತಿಲ್ಲ  ಎನ್ನುವ ತಕರಾರಿನ ಧ್ವನಿಗೆ ಸಚಿವ ಶಂಕರ್ ಕುಮ್ಮಕ್ಕು ನೀಡಿದ್ದಾರೆ ಎನ್ನುವುದು ಸುಳ್ಳು. ಇದು ಸಚಿವ ಹಾಗೂ ಶಾಸಕರ ನಡುವೆ ಮನಸ್ತಾಪ ತರುವ ಹುನ್ನಾರ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.

ಮುಖ್ಯಮಂತ್ರಿಗಳ ವಿವೇಚನೆಯ ಎಸ್‌ಎಫ್‌ಸಿ ವಿಶೇಷ ಅನುದಾನವನ್ನು ಶಾಸಕರು ಸರ್ಕಾರದ ನಿಯಮಗಳಿಗನುಸಾರವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ಪಕ್ಷ ಅಥವಾ ಇನ್ನಾವುದೇ ತಂತ್ರಗಾರಿಕೆ ಇಲ್ಲ. ಇದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಸದಸ್ಯರುಗಳಾದ ಪ್ರಕಾಶ ಪೂಜಾರ, ಪ್ರಕಾಶ ಬುರಡಿಕಟ್ಟಿ, ನಾಗರಾಜ ಅಡ್ಮನಿ, ಮಲ್ಲಣ್ಣ ಅಂಗಡಿ, ಹನುಮಂತಪ್ಪ ಹೆದ್ದೇರಿ ಹಾಗು ಇನ್ನಿತರೆ ಸದಸ್ಯರಿದ್ದರು.

error: Content is protected !!