25ನೇ ವಾರ್ಡ್‌ನಲ್ಲಿ ಕೊರೆಸಲಾದ ಬೋರ್‌ವೆಲ್ : ನಿರೀಕ್ಷೆಗೂ ಮೀರಿದ ನೀರು

ಹರಪನಹಳ್ಳಿ, ಜು.9- ಪಟ್ಟಣದ 25ನೇ ವಾರ್ಡ್ ತೆಕ್ಕದಗರಡಿ ಕೇರಿಯಲ್ಲಿ ಪುರಸಭೆಯಿಂದ ಬೋರ್‌ವೆಲ್ ಕೊರೆಸಲಾಗಿದ್ದು, ನಿರೀಕ್ಷೆಗೂ ಮೀರಿದ ನೀರು ಬಿದ್ದಿದ್ದರಿಂದ ಇಲ್ಲಿಯ ನಿವಾಸಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.

ಪುರಸಭೆ ಅಧ್ಯಕ್ಷ ಮಂಜುನಾಥ್ ಇಜಂತ್ಕರ್ ಮಾತನಾಡಿ, ಪುರಸಭೆಯ ವಿಶೇಷ ಅನುದಾನದಲ್ಲಿ ಬೋರ್‌ವೆಲ್ ಕೊರೆಸಲಾಗಿದೆ ಎಂದು ತಿಳಿಸಿದರು. 

ವಾರ್ಡಿನ ಸದಸ್ಯ ಟಿ.ವೆಂಕಟೇಶ್ ಮಾತನಾಡಿ, ಈ ಭಾಗದಲ್ಲಿ ಹೊಳೆ ನೀರು ಇದ್ದರೂ ನೀರಿನ ಅಭಾವ ಇತ್ತು. ಕಳೆದ ಎರಡು ಬಾರಿ ಬೋರ್‌ವೆಲ್ ಕೊರೆಸಿದ್ದರೂ ನೀರು ಬಿದ್ದಿರಲಿಲ್ಲ. ಆದರೆ ಇಂದು ನಿರೀಕ್ಷೆಗೂ ಮೀರಿದ ನೀರು ಬಿದ್ದಿರುವುದು ನನಗೆ ಖುಷಿ ತಂದಿದೆ. ಇದರಿಂದಾಗಿ ಜನ, ಜಾನುವಾರು ಗಳಿಗೆ ಅನುಕೂಲವಾಯಿತು ಎಂದರು.

ಈ ವೇಳೆ ಪುರಸಭೆ ಸದಸ್ಯ ಡಿ.ಅಬ್ದುಲ್ ರೆಹಮಾನ್ ಸಾಬ್, ಇಂಜಿನಿಯರ್ ಜಿ.ಯು.ಎಂ.ಸಿದ್ದೇಶ್ವರ ಸ್ವಾಮಿ, ಮುಖಂಡರಾದ ಕೌಟಿ ವಾಗೀಶ್, ಕೆ.ರಹಮತ್‌ವುಲ್ಲಾ, ದಾದಾ ಪೀರ್, ತಾಹೀರ್, ಮುಜುಬುರ್ ರೆಹಮಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!