ಮಣ್ಣೆತ್ತಿನ ಅಮವಾಸ್ಯೆ

ಹರಿಹರ, ಜು.8- ನಾಳೆ ಶುಕ್ರವಾರದ ಮಣ್ಣೆತ್ತಿನ ಅಮವಾಸ್ಯೆ ನಿಮಿತ್ತ್ಯ ಮಣ್ಣಿನಿಂದ ಮಾಡಿದ ಎತ್ತಿನ ಮೂರ್ತಿಗಳನ್ನು ಖರೀದಿ ಮಾಡಿ ತಂದು ಪೂಜಿಸುತ್ತಾರೆ.  ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳಿಂದ ಉತ್ತಮ ಇಳುವರಿ ಬರಲಿ ಎಂದು ವಿಶೇಷವಾಗಿ ಈ ದಿನ  ಪೂಜೆ ಸಲ್ಲಿಸುತ್ತಾರೆ. ನಗರದ ದೇವಸ್ಥಾನ ರಸ್ತೆಯಲ್ಲಿ ಮಣ್ಣಿನಿಂದ ತಯಾರಿಸಿದ ಎತ್ತಿನ ಮೂರ್ತಿಯನ್ನು ಸಾರ್ವಜನಿಕರು ಮತ್ತು ರೈತರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರು.

error: Content is protected !!