19 ರಂದು ಚನ್ನಗಿರಿಯಲ್ಲಿ ಬೇಡ ಜಂಗಮ ಸಮಾವೇಶ

ಹಾವೇರಿ, ಫೆ.15- ರಾಜ್ಯದ ಬೇಡ ಜಂಗಮರಿಗೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಹಕ್ಕುಗಳನ್ನು ಪಡೆಯಲು, ಇದೇ ದಿನಾಂಕ 19 ರಂದು ಚನ್ನಗಿರಿಯಲ್ಲಿ ನಡೆಯುವ ಬೃಹತ್  ಬೇಡ ಜಂಗಮ ಸಮಾವೇಶಕ್ಕೆ ಜಿಲ್ಲೆ ಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ಬೇಡ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಎಂ.ಎಂ.  ಹಿರೇಮಠ ಕರೆ ನೀಡಿದರು.

ನಗರದ ರೇಣುಕ ಮಂದಿರ (ನಡುವಿನ ಮಠ) ದಲ್ಲಿ ನಡೆದ  ಹಾವೇರಿ ಜಿಲ್ಲಾ ಬೇಡ ಜಂಗಮರ ಸಭೆಯಲ್ಲಿ ಮಾತನಾಡಿದ ಅವರು,  ರಾಜ್ಯದಲ್ಲಿ ಅತೀ ಹಿಂದುಳಿದ ಜಾತಿಗಳಲ್ಲಿ ಬೇಡ ಜಂಗಮ ಸಮಾಜವೂ ಒಂದು. ಕೇಂದ್ರ ಸರಕಾರ ಸಂವಿಧಾನದಲ್ಲಿ ಸ್ಪಷ್ಟವಾಗಿ ಬೇಡ ಜಂಗಮ ಜಾತಿಯ ಬಗ್ಗೆ ನಮೂದಿಸಿದೆ. ಅಲ್ಲದೇ ಸೂರ್ಯನಾಥ ಕಾಮತ್‌ರ ವರದಿಯಲ್ಲಿ ಮತ್ತು ಕೋರ್ಟ್‌ ಆದೇಶದಲ್ಲಿಯೂ ರಾಜ್ಯದ ಮಾಮೂಲಿ ಜಂಗಮರೇ ಬೇಡ ಜಂಗಮರು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ ಕೆಲ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಸರ್ಕಾರ ಮತ್ತು ಅಧಿಕಾರಿಗಳು ಬೇಡ ಜಂಗಮರಿಗೆ ಸಿಗಬೇಕಾಗಿರುವ ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದರು.

ಜಂಗಮರೆಲ್ಲರೂ ಸಂಘಟನೆಯ ಮುಖಾಂತರ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ.

ಜಿಲ್ಲಾ ಬೇಡ ಜಂಗಮ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಮಠದ ಮಾತನಾಡಿ, ಬೇಡ ಜಂಗಮರು ಯಾರ ಹಕ್ಕನ್ನೂ ಕಿತ್ತುಕೊಂಡಿಲ್ಲ ಮತ್ತು ಕಿತ್ತುಕೊಳ್ಳುತ್ತಿಲ್ಲ. ಆದರೆ ತಮಗೆ ಸಂವಿಧಾನಾತ್ಮಕವಾಗಿ ಸಿಗಬೇಕಾಗಿರುವ ಹಕ್ಕನ್ನು ಪಡೆದುಕೊಳ್ಳಲು ಸಂಘಟನೆಯ ಮುಖಾಂತರ ಹೋರಾಟ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಶಿವಯೋಗಿ ಹುಲಿಕಂತಿಮಠ, ಗುರುನಾಥಯ್ಯ ಮಳ್ಳೂರಮಠ, ರಾಜು ಲಕ್ಷ್ಮೇಶ್ವರಮಠ, ಕುಮಾರಸ್ವಾಮಿ ಹಿರೇಮಠ, ಶಿವಬಸಯ್ಯ ವಿರಕ್ತಮಠ, ಸಿದ್ದಯ್ಯ ಗೌರಿಮಠ, ಎಸ್.ಪಿ. ಮುದೇನೂರಮಠ, ಗುರುಶಾಂತಯ್ಯ ವಿ. ಹಿರೇಮಠ, ಚಂದ್ರಶೇಖರಯ್ಯ ಗುಂಡೂರಮಠ, ಶಂಕ್ರಯ್ಯ ಹೆಬ್ಬಳ್ಳಿಮಠ, ರುದ್ರಯ್ಯ ಮಡ್ಲಿಮಠ, ಜಿ.ಎಸ್.   ಚನ್ನಾಪುರಮಠ, ಕೊಟ್ರಯ್ಯ ಚರಂತಿಮಠ ಸೇರಿದಂತೆ, ಅನೇಕರು ಭಾಗವಹಿಸಿ ದ್ದರು. ರಾಜು ಕಲ್ಯಾಣಮಠ ನಿರೂಪಿಸಿದರು. ಗುರುಬಸಯ್ಯ ಚಪ್ಪರದಹಳ್ಳಿಮಠ ವಂದಿಸಿದರು.

error: Content is protected !!