ಸಿಪಿಐ ಬಾಲಚಂದ್ರಗೆ ರಾಷ್ಟ್ರಪತಿ ಪದಕ

ಸಿಪಿಐ ಬಾಲಚಂದ್ರಗೆ ರಾಷ್ಟ್ರಪತಿ ಪದಕ - Janathavaniಚಿತ್ರದುರ್ಗ, ಫೆ.12- ಇಲ್ಲಿನ ಗ್ರಾಮಾಂತರ ಪೊಲೀಸ್‌ ಠಾಣೆಯ ವೃತ್ತಾಧಿಕಾರಿ ಬಾಲಚಂದ್ರ ನಾಯ್ಕ್ ಅವರಿಗೆ ರಾಷ್ಟ್ರಪತಿ ಪದಕ ಲಭಿಸಿದೆ.  

ಮೂಲತಃ ಚನ್ನಗಿರಿ ತಾಲ್ಲೂಕಿನ ಯಲೋದಹಳ್ಳಿಯ ಬಾಲಚಂದ್ರ ನಾಯ್ಕ್‌ ಅವರು ಸೂಕ್ಷ್ಮ ಜೀವ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

ರೈತ ಕುಟುಂಬದ ಶಂಕರ ನಾಯ್ಕ್‌ ಹಾಗೂ ಯಮುನಾಬಾಯಿ ದಂಪತಿ ಪುತ್ರರಾದ ಬಾಲಚಂದ್ರ ನಾಯ್ಕ್‌ 1999 ರಲ್ಲಿ ಪಿಎಸ್‌ಐ ಆಗಿ ಪೊಲೀಸ್‌ ಇಲಾಖೆಗೆ ಸೇರಿದ್ದರು. 

2014 ರಲ್ಲಿ ಇನ್‌ಸ್ಪೆಕ್ಟರ್‌ ಆಗಿ ಬಡ್ತಿ ಪಡೆದ ಅವರು, ಬೆಸ್ಕಾಂ ಜಾಗೃತ ದಳ, ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ತನಿಖೆ ಹಾಗೂ ಮೇಲ್ವಿಚಾರಣೆಯಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆಗಾಗಿ ಅವರು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

error: Content is protected !!