ಕೊಟ್ಟೂರು ಜಾತ್ರೆಗೆ ಅನುಮತಿ

ಕೊಟ್ಟೂರು ಜಾತ್ರೆಗೆ ಅನುಮತಿ - Janathavaniಕೊಟ್ಟೂರು, ಫೆ. 9 – ಕರ್ನಾಟಕದ ಹೆಸರಾಂತ ರಥೋತ್ಸವ ಗಳಲ್ಲೊಂದಾದ ಕೊಟ್ಟೂರಿನ ಶ್ರೀ ಗುರು ಬಸವೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಸಲು ಸರ್ಕಾರದಿಂದ ಅನುಮತಿ ದೊರಕಿದೆ.

ದೇವಸ್ಥಾನ, ಮಠಗಳು ಸೇರಿದಂತೆ ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳಲ್ಲಿ ಸಂಪ್ರದಾಯದ ರೀತಿ ಜಾತ್ರಾ ಮಹೋತ್ಸವಗಳನ್ನು ಆಚರಿಸಲು ಸರ್ಕಾರ ಅನುಮತಿ ನೀಡಿರುವುದರಿಂದ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಕೊಟ್ಟೂರು ಗುರು ಬಸವೇಶ್ವರ ಸ್ವಾಮಿಯ ರಥೋ ತ್ಸವವು ಬರುವ ಮಾರ್ಚ್‌ 7ರಂದು ನಡೆಯಲಿದೆ.

error: Content is protected !!