ದಾವಣಗೆರೆಗೆ ಆಮ್ಲಜನಕದ ಕೊಡುಗೆ ನೀಡೋಣವೇ…

ದಾವಣಗೆರೆ, ಜು.4- ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸುಮಾರು 20 ವರ್ಷಗಳಿಂದ ಪರಿಸರ ಜಾಗೃತಿ ಸಮುದಾಯ ಹೆಸರಿನಲ್ಲಿ ಪರಿಸರ ಸಂರಕ್ಷಣೆ ಕುರಿತು ಕಾರ್ಯವೆಸಗುತ್ತ ಲೇ ಬರುತ್ತಿದೆ. ಈ ವರ್ಷವೂ ಸಹ 4000 ಗಿಡಗಳನ್ನು ನೆಟ್ಟು ಸಂರಕ್ಷಿಸುವ ಉದ್ದೇಶ ಟ್ರಸ್ಟಿನದಾಗಿದೆ. ಪ್ರತಿ ಮನೆಗೆ ಎರಡು ಗಿಡ ನೆಡಬೇಕೆಂಬ ಕಾನೂನಿದೆ. ಆದರೆ ಪಾಲಿಸುತ್ತಿಲ್ಲ. ನಾವು ಗಿಡಗಳನ್ನು ಬೆಳೆಸದೆ, ಇದ್ದ ಮರಗಳನ್ನೂ ಕಡಿದು ನಮ್ಮ ನಗರವನ್ನು ಕಾಂಕ್ರೀಟ್ ಕಾಡಾಗಿ ಮಾಡುತ್ತಿದ್ದೇವೆ.  ಟ್ರಸ್ಟ್‌ನಿಂದ ಮನೆಯ ಮುಂದೆ ಗಿಡ ಹಾಕಿಕೊಡಲಾಗುವುದು. ಆಸಕ್ತರು ಮೊ: 9538024422 ಸಂಪರ್ಕಿಸುವುದು.

error: Content is protected !!