ವಾಸವಿ ಕ್ಲಬ್ ದೇವನಗರಿ ಅಧ್ಯಕ್ಷರಾಗಿ ಆರ್.ಸಿ.ರಮೇಶ್

ದಾವಣಗೆರೆ, ಫೆ.6- ವಾಸವಿ ಕ್ಲಬ್ ದೇವನಗರಿ ಅಧ್ಯಕ್ಷರಾಗಿ ಆರ್.ಸಿ. ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ. ರಂಗನಾಥ್, ಖಜಾಂಚಿಯಾಗಿ ಸುನಿತಾ ಭಾರ್ಗವಿ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂ ಭವು ನಾಳೆ ದಿನಾಂಕ 7ರ ಭಾನುವಾರ ಸಂಜೆ 6 ಗಂಟೆಗೆ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿರುವ ಶ್ರೀ ದತ್ತ ಮಂದಿರದಲ್ಲಿ ನಡೆಯಲಿದೆ.

ವಾಸವಿ ಕ್ಲಬ್ ದೇವನಗರಿ ನೂತನ ಅಧ್ಯಕ್ಷ ರಮೇಶ್ ಅವರ ನೇತೃತ್ವದ ಪದಾಧಿಕಾರಿಗಳಿಗೆ ಸಂಸ್ಥೆಯ ಜಿಲ್ಲಾ ವಿ301ಎ ವಿಸಿಐ ರಾಜ್ಯಪಾಲ ಪದ್ಮಾವತಿ ಕೃಷ್ಣಪ್ರಸಾದ್ ಪ್ರಮಾಣ ವಚನ ಬೋಧಿಸುವರು. ಶ್ರೀ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಮಾಜಿ ನಿರ್ದೇಶಕರಾದ ಶ್ರೀಮತಿ ಗೀತಾ ಬದರಿನಾಥ್ ವಿಶೇಷ ಆಹ್ವಾನಿತರಾಗಿದ್ದಾರೆ. ಕ್ಲಬ್‌ನ ರೀಜಿನಲ್ ಛೇರ್‌ಪರ್ಸನ್ ಬಿ.ಎ. ಚಂದ್ರಕುಮಾರ್ ಅವರು ಮುಖ್ಯ ಅತಿಥಿಯಾಗಿದ್ದಾರೆ.

ಪದಾಧಿಕಾರಿಗಳು : ವಾಸವಿ ಕ್ಲಬ್ ದೇವನಗರಿಗೆ ಆರ್.ಸಿ. ರಮೇಶ್ ಅಧ್ಯಕ್ಷತೆಯಲ್ಲಿ ಆಯ್ಕೆಯಾಗಿರುವ ಪದಾಧಿಕಾರಿಗಳ ವಿವರ :

ಉಪಾಧ್ಯಕ್ಷರು : ಪಿ.ಎಸ್. ರವಿ, ಮಾಲತೇಶ್ ಸಿ. ಹಲ್ಲೂರು, ಜಂಟಿ ಕಾರ್ಯದರ್ಶಿಗಳು : ಇ.ಎಸ್. ನಾಗರಾಜ್, ಬಿ.ಸಿ. ವರಮಹಾಲಕ್ಷ್ಮಿ, ಜಂಟಿ ಖಜಾಂಚಿಗಳು : ಲಲಿತಾ ಸುರೇಶ್, ಎಸ್.ಎಸ್. ಶ್ರೀನಿವಾಸಲು, ಛೇರ್ಮನ್ ನರೇಂದ್ರನಾಥ್ ಸಂಜಿ, ಎಸ್.ರಾಘವೇಂದ್ರ, ಸಂಪರ್ಕಾಧಿಕಾರಿಗಳು : ವೆಂಕಟೇಶಮೂರ್ತಿ, ಕೆ.ಶ್ರೀನಿವಾಸ್.

ನಿರ್ದೇಶಕರುಗಳು : ಜಯಲಕ್ಷ್ಮಿ ಎಂ .ಹಲ್ಲೂರು, ಲಕ್ಷ್ಮಿ ಸತೀಶ್, ಡಾ. ಚಿತ್ತಾಲಿ ಎನ್. ಸಂಜಿ, ವೀಣಾ ಪ್ರಭಾಕರ್, ಪಿ. ರಾಜಗುಪ್ತಾ, ಸುಮ ವೆಂಕಟೇಶ್, ಪಿ.ಅರುಣ, ಎನ್. ಜಯಶ್ರೀ, ಎಸ್.ಎ. ಶ್ರೀಲಕ್ಷ್ಮಿ, ಆರ್. ಗಾಯತ್ರಿ ರಮೇಶ್.

error: Content is protected !!