ಕುರುಬ ಸಮಾವೇಶಕ್ಕೆ ಹೊನ್ನಾಳಿ ತಾ.ನಿಂದ 10 ಸಾವಿರಕ್ಕೂ ಹೆಚ್ಚು ಜನ

ಹೊನ್ನಾಳಿ, ಫೆ.5- ಕುರುಬ ಸಮಾಜದ ಮೀಸಲಾತಿ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನ ಸಮಾವೇಶಕ್ಕೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮಾಜದವರು ಭಾಗವಹಿಸುತ್ತಿರುವುದಾಗಿ ಸಮಾಜದ ತಾಲ್ಲೂಕು ಕಾರ್ಯದರ್ಶಿ ಕುಬೇರಪ್ಪ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀಗಳ ಕರೆಯ ಮೇರೆಗೆ ತಾಲ್ಲೂಕಿನ ಹತ್ತು ಸಾವಿರಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಹೆಚ್.ಬಿ. ಮಂಜಪ್ಪ, ರಮೇಶ್, ಚನ್ನಪ್ಪ, ವಿಜೇಂದ್ರ, ಮಹೇಶ್, ಬೀರಪ್ಪ, ಆನಂದ್ ರಾಜು, ರಂಜಿತ್ ಇನ್ನಿತರರಿದ್ದರು.

error: Content is protected !!