ಬಿಜೆಪಿ ವೈದ್ಯ ಪ್ರಕೋಷ್ಟದಿಂದ ವೈದ್ಯರಿಗೆ ಸನ್ಮಾನ

ರಾಣೇಬೆನ್ನೂರು, ಜು.1- ವೈದ್ಯರಾಗಿ ಅಮೋಘ ಸೇವೆ ಸಲ್ಲಿಸಿದ ಡಾ. ಬಿ.ಸಿ. ರಾಯ್‌ ಅವರ ಜನ್ಮ ದಿನದ ನಿಮಿತ್ಯ  ಅವರ ಸೇವೆಯ ಸ್ಮರಣೆಗಾಗಿ ಇಂದು ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಹೇಳಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಟದಿಂದ  ವೈದ್ಯರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಡಾ. ರಾಯ್ ಅವರು ಕೇವಲ ವೈದ್ಯರಾಗಿ ರಲಿಲ್ಲ. ಉತ್ತಮ ರಾಜಕಾರಣಿ ಕೂಡ ಆಗಿದ್ದ ಅವರು, ಮುಖ್ಯಮಂತ್ರಿಗಳಾಗಿ, ರಾಜ್ಯಪಾಲರಾಗಿ  ಕಾರ್ಯನಿರ್ವಹಿಸಿದ್ದಾರೆ ಎಂದು ಸ್ಮರಿಸಿದರು. ಒಂದು ವರ್ಷದಿಂದ ಕೋವಿಡ್‌ ಜಗತ್ತಿನ ಜನರ ಜೀವಕ್ಕೆ ಬಹಳಷ್ಟು ಹಾನಿ ಮಾಡುತ್ತಿದೆ. ಈ ಸಂದರ್ಭದಲ್ಲಿ ವೈದ್ಯರು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಡಾ. ಕೇಲಗಾರ ಹೇಳಿದರು.

ಡಾ. ರವಿ ಕುಲ್ಕರ್ಣಿ, ಡಾ. ಥಂಡಿ, ಬಿಜೆಪಿ ಮುಖಂಡರಾದ ರಮೇಶ ಗುತ್ತಲ, ಮೈಲಪ್ಪ ಗೋಣಿಬಸಮ್ಮನವರ, ಡಿ.ಎಸ್. ಹರಪನಹಳ್ಳಿ, ಡಾ. ಪರಮೇಶ್ವರಪ್ಪ, ಡಾ. ಕಿರಣ ನಾಡಿಗೇರ, ಡಾ. ಮಂಜುಳಾ ಶೇಜವಾಡಕರ, ಡಾ. ಎನ್. ಪ್ರತಿಭಾ, ಡಾ. ಕೆ. ರಾಜೇಶ್ವರಿ ಇನ್ನಿತರರಿದ್ದರು.

error: Content is protected !!