ಕುಮಾರ ಪಟ್ಟಣಂನಲ್ಲಿ ಎರಡನೇ ತುಂಗಾರತಿ

ಕುಮಾರ ಪಟ್ಟಣಂನಲ್ಲಿ ಎರಡನೇ ತುಂಗಾರತಿ - Janathavaniರಾಣೇಬೆನ್ನೂರು, ಫೆ.1- ಭೂ ಮಾತೆ, ಗೋ ಮಾತೆ, ಗಂಗಾ ಮಾತೆ ಹಾಗೂ ನಿಸರ್ಗ ಮಾತೆ ಯನ್ನು ಪೂಜಿಸುವ ಪುಣ್ಯ ಭೂಮಿ ಭಾರತ. ಉತ್ತರ ಭಾರತದ ಹರಿದ್ವಾರ, ಋಶಿಕೇಶ, ಕಾಶಿಯಲ್ಲಿ  ನಡೆಸುವ ಗಂಗಾರತಿಯಂತೆ ಪುಣ್ಯಕೋಟಿ ಮಠದಿಂದ ತುಂಗಭದ್ರಾ ತೀರದಲ್ಲಿ ತುಂಗಾರತಿ ಸಮಾರಂಭವನ್ನು ಫೆಬ್ರವರಿ ತಿಂಗಳಲ್ಲಿ ನಡೆಸಲಾಗುತ್ತಿದೆ ಎಂದು ಪೀಠಾಧಿಪತಿ ಬಾಲಯೋಗಿ ಶ್ರೀ ಜಗದೀಶ್ವರ ಸ್ವಾಮೀಜಿ ತಿಳಿಸಿದರು.

ರಂಭಾಪುರಿ ಜಗದ್ಗುರು ಲಿಂ. ವೀರಗಂಗಾಧರ ಮಹಾಸ್ವಾಮಿಗಳ ಪುಣ್ಯಾರಾಧನೆ ನಿಮಿತ್ಯ ನಡೆಸಲಾಗುವ ಈ ಸಮಾರಂಭದ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರು ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾ ಮಿಗಳು ವಹಿಸುವರು. ರಾಜನಹಳ್ಳಿ ವಾಲ್ಮೀಕಿ ಪೀಠದ ಜಗದ್ಗುರುಗಳು  ಹಾಗೂ ಆದಿಚುಂಚನಗಿರಿ  ಸಂಸ್ಥಾನದ ಜಗದ್ಗುರುಗಳು ಪಾಲ್ಗೊಳ್ಳುವರು.

ವೃಷಭರೂಪಿಗಳಾದ   ರಾಮನಗರ ಜಿಲ್ಲೆಯ ಕವಣಾಪುರದ ಶ್ರೀ ಬಸವೇಶ್ವರ ಸ್ವಾಮಿಗಳು ದಿನಾಂಕ 27 ರಂದು ಆಗಮಿಸಿ ಎರಡು ದಿನ ಇಲ್ಲಿಯೇ ವಾಸ್ತವ್ಯ ಮಾಡಿ ನಂಬಿದ ಭಕ್ತರನ್ನು ಆಶೀರ್ವದಿಸಲಿದ್ದಾರೆ.  

ಸಮಾರಂಭದಲ್ಲಿ ಶಾಸಕ ಅರುಣಕುಮಾರ ಪೂಜಾರ್, ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಭಾಗವಹಿಸುವರು ಎಂದು ಬಾಲಯೋಗಿ ಶ್ರೀ ಜಗದೀಶ್ವರ ಸ್ವಾಮೀಜಿ ತಿಳಿಸಿದ್ದಾರೆ.

 

error: Content is protected !!