ಕೊರೊನಾ ವಾರಿಯರ್ ಕಾಳಾನಾಯ್ಕ ನಿಧನ

ಕೊರೊನಾ ವಾರಿಯರ್ ಕಾಳಾನಾಯ್ಕ ನಿಧನ - Janathavaniದಾವಣಗೆರೆ, ಜ. 18 – ಕೊರೊನಾ ಸೋಂಕಿಗೆ ಗುರಿಯಾಗಿ ನಂತರದ ಪರಿಣಾಮಗಳಿಂದ ಬಳಲುತ್ತಿದ್ದ ಕೊರೊನಾ ವಾರಿಯರ್ ಕಾಳಾನಾಯ್ಕ ಸಾವನ್ನಪ್ಪಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.

ಆರೋಗ್ಯ ಇಲಾಖೆ ಸೇವೆಯಲ್ಲಿದ್ದ ಕೊರೊನಾ ವಾರಿಯರ್ ಕಾಳನಾಯ್ಕ ಅವರು, ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಪಿ.ಆರ್.ಸಿ.ಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತೀವ್ರ ಉಸಿರಾಟದ ತೊಂದರೆಯಿಂದಾಗಿ ಅವರು  ಭಾನುವಾರ ತಡರಾತ್ರಿ 1.45ಕ್ಕೆ ನಿಧನರಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ನಿತ್ಯ ನೂರಾರು ಜನರ ಸ್ವಾಬ್ ಸಂಗ್ರಹಿಸುತ್ತಿದ್ದರು. ಈ ಕರ್ತವ್ಯ ನಿರ್ವಹಣೆ ವೇಳೆ ಸೋಂಕಿಗೂ ತುತ್ತಾಗಿ, ಗುಣಮುಖರಾಗಿದ್ದರು. ಆದರೆ, ಸೋಂಕಿನ ನಂತರದಲ್ಲಿ ಅನಾರೋಗ್ಯಕ್ಕೆ ಸಿಲುಕಿದ್ದರು. ಬಹು ಅಂಗಾಂಗ ವೈಫಲ್ಯಕ್ಕೆ ಗುರಿಯಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

error: Content is protected !!