ಸಿಎಂ ಬದಲಾವಣೆ ಇಲ್ಲ, 15 ರೊಳಗೆ ಸಂಪುಟ ವಿಸ್ತರಣೆ : ರಮೇಶ್‍ ಜಾರಕಿಹೊಳಿ

ಸಿಎಂ ಬದಲಾವಣೆ ಇಲ್ಲ, 15 ರೊಳಗೆ ಸಂಪುಟ ವಿಸ್ತರಣೆ : ರಮೇಶ್‍ ಜಾರಕಿಹೊಳಿ - Janathavaniಮಲೇಬೆನ್ನೂರು, ಜ.11 – ಸಿಎಂ ಬದಲಾವಣೆ ಎಂಬುದು ಶುದ್ದ ಸುಳ್ಳು, ಅವಧಿ ಪೂರ್ಣ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ರುತ್ತಾರೆ  ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದೇ ದಿನಾಂಕ 15 ರೊಳಗಾಗಿ ಸಂಪುಟ ವಿಸ್ತರಣೆ ಖಚಿತ ಎಂದರು. 

ಆರ್.ಶಂಕರ್, ಎಂಟಿಬಿ ನಾಗರಾಜ್‍ ಸೇರಿದಂತೆ ಮತ್ತಿತರರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಯಡಿಯೂರಪ್ಪ ಅವರ ಬಗ್ಗೆ ಮಾಜಿ ಸಚಿವ ಹೆಚ್‍. ವಿಶ್ವನಾಥ್ ಅವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಯತ್ನಾಳ್ ಅವರ ಯಾವ ಹೇಳಿಕೆಗೂ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು  ರಮೇಶ್ ಹೇಳಿದರು. 

ಸತೀಶ್‍ ಜಾರಕಿಹೊಳಿ ಸಿಎಂ ಅಭ್ಯರ್ಥಿ ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದಾರಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿ, 2023 ರವರೆಗೆ ಬಿಜೆಪಿ ಸರ್ಕಾರ ಇರುತ್ತದೆ. ಮುಂದಿನದು ನನಗೆ ಗೊತ್ತಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಎಸ್ಟಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿದರೆ ಸ್ವಾಗತಿಸುತ್ತೇನೆ, ಎಸ್ಟೀ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರವಾಗಿ ನಮ್ಮ ಸರ್ಕಾರ ಶೀಘ್ರ ತನ್ನ ನಿರ್ಧಾರ ಪ್ರಕಟಿಸಲಿದೆ ಎಂಬ ವಿಶ್ವಾಸವಿದೆ ಎಂದರು.

error: Content is protected !!