ಡಿವೈಎಸ್ಪಿ ಬಸವರಾಜ್- ಮುಖ್ಯಪೇದೆ ರಾಮಚಂದ್ರಗೆ ರಾಷ್ಟ್ರಪತಿ ಪದಕ

ಡಿವೈಎಸ್ಪಿ ಬಸವರಾಜ್- ಮುಖ್ಯಪೇದೆ ರಾಮಚಂದ್ರಗೆ ರಾಷ್ಟ್ರಪತಿ ಪದಕ - Janathavaniದಾವಣಗೆರೆ, ಜ.8- ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆಯನ್ನು ಪರಿಗಣಿಸಿ ನೀಡಲಾಗುವ 2019 ರ ರಾಷ್ಟ್ರಪತಿ ಪದಕಕ್ಕೆ ಜಿಲ್ಲಾ ಪೊಲೀಸ್ ನ ಡಿಸಿಆರ್ ಬಿ ಡಿವೈಎಸ್ಪಿ ಬಿ.ಎಸ್. ಬಸವರಾಜ್ ಮತ್ತು ಜಿಲ್ಲಾ ಪೊಲೀಸ್ ಕಚೇರಿ ಗಣಕ ಯಂತ್ರ ವಿಭಾಗದ ಹೆಡ್ ಕಾನ್ಸ್ ಟೇಬಲ್ ರಾಮಚಂದ್ರ ಬಿ. ಜಾಧವ್ ಭಾಜನರಾಗಿದ್ದಾರೆ.

ಬೆಂಗಳೂರಿನ ರಾಜಭವನದಲ್ಲಿ ನಿನ್ನೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲರಿಂದ  ಬಸವರಾಜ್ ಮತ್ತು ರಾಮಚಂದ್ರ ಅವರುಗಳು ರಾಷ್ಟ್ರಪತಿ ಪದಕ ಸ್ವೀಕರಿಸಿದ್ದಾರೆ. 

ರಾಷ್ಟ್ರಪತಿ ಪದಕ ವಿಜೇತ ಬಸವರಾಜ್ ಮತ್ತು ರಾಮಚಂದ್ರ ಅವರುಗಳನ್ನು ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಅಭಿನಂದಿಸಿದ್ದಾರೆ.

error: Content is protected !!