ಮದ್ಯಪಾನದಿಂದ ಜನರ ಮನೆ-ಮನಸ್ಸುಗಳು ಹಾಳಾಗುತ್ತಿವೆ

ಭಾರತೀಯ ಗ್ರಾಮೀಣ ಮಹಿಳಾ ಸಂಘದಿಂದ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪ್ರೊ. ಸುಮ ವಿ. ಮಠದ್ ವಿಷಾದ

ದಾವಣಗೆರೆ, ಜ.4- ಪ್ರಸ್ತುತ ಯುವಪೀಳಿಗೆ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವ ಬದಲು, ಪಾಶ್ಚಿಮಾತ್ಯ ಸಂಸ್ಕೃತಿಗೆ ತಲೆಬಾಗುತ್ತಿದ್ದಾರೆ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಸಂಘಟನಾಕಾರರಾದ ಪ್ರೊ. ಸುಮ ವಿ. ಮಠದ್ ಬೇಸರ ವ್ಯಕ್ತಪಡಿಸಿದರು.

ನಗರದ ವನಿತಾ ಸಮಾಜದ ಆವರಣದಲ್ಲಿ ವನಿತಾ ಸಮಾಜದ ಭಾರತೀಯ ಗ್ರಾಮೀಣ ಮಹಿಳಾ ಸಂಘದಿಂದ ಇಂದು ಸಂಜೆ ಏರ್ಪಾಡಾಗಿದ್ದ ನೂತನ ವರ್ಷ 2021ಕ್ಕೆ ಸಂಗೀತ ಸಂಜೆ, ಮಧುರ ಗೀತೆಗಳ ಸಂಗಮ ಮತ್ತು ಕ್ಯಾಂಪ್ ಫೈಯರ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೇವಲ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ದೂಷಿಸುವುದಲ್ಲ. ಕೆಲ ಉತ್ತಮ ವಿಚಾರ, ವಸ್ತುಗಳೂ ಇದ್ದು, ಅವುಗಳನ್ನಷ್ಟೆ ಸದ್ಬಳಕೆಗೆ ಮಾಡಿಕೊಳ್ಳಬೇಕು. 

ಇಡೀ ವಿಶ್ವದಲ್ಲೇ ಸಂಸ್ಕೃತಿ ಹಾಳಾಗುತ್ತಿರುವುದರಿಂದ ನಮ್ಮ ದೇಶದ ಸಂಸ್ಕೃತಿಯೂ ಹಾಳಾಗುತ್ತಿದೆ. ಸಾಂಸ್ಕೃತಿಕ ಮಟ್ಟ ಹೆಚ್ಚಾಗಿ ಸಾಂಸ್ಕೃತಿಕ ಸಮಾಜ ನಿರ್ಮಾಣವಾಗುವ ಮುಖೇನ ವಿಶ್ವ ಸಂಸ್ಕೃತಿಯಾಗಬೇಕು ಎಂದು ಆಶಿಸಿದರು. 

ಹಿನ್ನೆಲೆ ಗಾಯಕರುಗಳಾದ ಪೂಜಾ, ಶ್ರೀಧರ್, ಪವನ್ ಹಾಗೂ ನ್ಯಾಯಾಂಗ ಇಲಾಖೆಯ ಮತ್ತು ಗಾಯಕರಾದ ಟಿ.ಆರ್. ಹೇಮಂತ್ ಕುಮಾರ್ ಹಳೆಯ ಚಿತ್ರಗೀತೆಗಳು, ಮಧುರ ಗೀತೆಗಳನ್ನು ಹಾಡಿ ಸಂಗೀತ ಲೋಕಕ್ಕೆ ಕೊಂಡೊಯ್ದು ಸಂಗೀತದ ಸವಿ ಉಣಬಡಿಸಿದರು.

ಇದೇ ವೇಳೆ ತಂಪಿನ ವಾತಾವರಣದಲ್ಲಿ ಕ್ಯಾಂಪ್ ಫೈಯರ್ ಮುಖೇನ ಬೆಚ್ಚನೆಯ ಮಡಿಲಲ್ಲಿ ಇಂಪಾದ ಸಂಗೀತ ಮುದವನ್ನುಂಟು ಮಾಡಿತು.

ಈ ಸಂದರ್ಭದಲ್ಲಿ ಬಿಐಇಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಕೆ. ಗಣೇಶ್, ವನಿತಾ ಸಮಾಜದ ಗೌರವಾಧ್ಯಕ್ಷರಾದ ಶ್ರೀಮತಿ ಸಿ. ನಾಗಮ್ಮ ಕೇಶವಮೂರ್ತಿ, ಅಧ್ಯಕ್ಷರಾದ ಶ್ರೀಮತಿ ಗುಂಡಿ ಪುಷ್ಪ ಸಿದ್ದೇಶ್, ಕಾರ್ಯದರ್ಶಿ ಶ್ರೀಮತಿ ಗೀತಾ ಬದ್ರಿನಾಥ್ ಸೇರಿದಂತೆ ಇತರರು ಇದ್ದರು.

error: Content is protected !!