ಚಿಕ್ಕೋಳ್ ಈಶ್ವರಪ್ಪಗೆ ರಾಷ್ಟ್ರಪ್ರಶಸ್ತಿ

ದಾವಣಗೆರೆ, ಫೆ. 25-  ಹಿರೇಕೋಗಲೂರಿನ ಹಿರಿಯ ಪತ್ರಕರ್ತರೂ,  ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರೂ ಆದ ಚಿಕ್ಕೋಳ್ ಈಶ್ವರಪ್ಪ ಅವರ ಸುದೀರ್ಘ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಕರ್ನಾಟಕ ಜನತಾ ಸೇನಾ ದಳದ ರಾಜ್ಯ ಸಮಿತಿಯು ಬೆಂಗಳೂರಿನ ನಯನ ಸಭಾಂಗಣ (ಕನ್ನಡ ಭವನ) ದಲ್ಲಿ  ಇತ್ತೀಚಿಗೆ ನಡೆದ ಸಿದ್ಧಗಂಗಾ ಶ್ರೀ ನೆನಪು ಕಾರ್ಯಕ್ರಮ ಹಾಗೂ ಸಿದ್ಧಗಂಗಾ ಶ್ರೀ ನೆನಪು ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ‘ಸಿದ್ಧಗಂಗಾ ಶ್ರೀ ಸದ್ಭಾವನಾ’ ರಾಷ್ಟ್ರೀಯ ಪ್ರಶಸ್ತಿಯನ್ನು  ಅವರಿಗೆ ಪ್ರದಾನ ಮಾಡಲಾಯಿತು.

ಬೇಲಿಮಠದ  ಶ್ರೀ ಶಿವರುದ್ರ ಮಹಾಸ್ವಾಮೀಜಿ, ಡಾ. ಶ್ರೀ ಕಾಲಜ್ಞಾನ ಬ್ರಹ್ಮ ಸದ್ಗುರು ಶ್ರೀ ಶರಣ ಬಸವ ಮಹಾಸ್ವಾಮೀಜಿ,  ಶ್ರೀ ಪಲ್ಲಕ್ಕಿ ನಾರಾಯಣ ಸ್ವಾಮೀಜಿ, ಡಾ.ಕೆ. ಪುತ್ತೂರಾಯರು, ನಾಡೋಜ ಡಾ. ಮನು ಬಳಿಗಾರ್, ಹೆಚ್. ಸದಾಶಿವ,   ಡಾ.ಹಿರೇಮಠ್ ಅವರುಗಳು ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. 

error: Content is protected !!