ತಪೋಕ್ಷೇತ್ರ ಕಣ್ವಕುಪ್ಪೆಯಲ್ಲಿ ಸಂಕ್ರಾಂತಿ ಹಬ್ಬ ಸರಳವಾಗಿ ಆಚರಣೆ

ತಪೋಕ್ಷೇತ್ರ ಕಣ್ವಕುಪ್ಪೆಯಲ್ಲಿ ಸಂಕ್ರಾಂತಿ ಹಬ್ಬ ಸರಳವಾಗಿ ಆಚರಣೆ - Janathavaniಜಗಳೂರು, ಜ.11- ತಾಲ್ಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ  ಈ ಬಾರಿ ಮಕರ ಸಂಕ್ರಾಂತಿ ಮತ್ತು ಶ್ರೀ ಮುಮ್ಮಡಿ ಶಾಂತಲಿಂಗ ಶಿವಾಚಾರ್ಯರ ರಥೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. 

ಪ್ರತಿವರ್ಷದ ಆಚರಣೆಯಂತೆ ಈ ಬಾರಿಯೂ ಗವಿಮಠದಲ್ಲಿ ಇದೇ ದಿನಾಂಕ 15 ರ ಶನಿವಾರ ಮತ್ತು 16ರ ಭಾನುವಾರ ನಡೆಯಬೇಕಿದ್ದ ಧಾರ್ಮಿಕ ಅಚರಣೆ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮಾತ್ರ ಅಚರಿಸಲಾಗುತ್ತದೆ. ಭಕ್ತರು ತಮ್ಮ ತಮ್ಮ ಗ್ರಾಮ, ಮನೆಗಳಲ್ಲಿಯೇ ಸರಳವಾಗಿ ಸಂಕ್ರಾಂತಿ ಆಚರಿಸಿಕೊಂಡು, ಮುಮ್ಮಡಿ ಶ್ರೀಗಳನ್ನು ಮನಗಳಲ್ಲಿಯೆ ಸ್ಮರಿಸಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಶ್ರೀಗಳು ಸಲಹೆ ನೀಡಿದ್ದಾರೆ.

error: Content is protected !!