ಕಾಂ. ಶೇಖರಪ್ಪ, ಕಾಂ. ಸುರೇಶ್, ಕಾಂ.ಪಂಪಾಪತಿ ಸ್ಮರಣೆ

ದಾವಣಗೆರೆ, ಏ.3- ಹುತಾತ್ಮರ ಸ್ಮರಣೆಯೊಂದಿಗೆ ಅವರುಗಳ ಆದರ್ಶಗಳ ‌ಹೊಸ ಗುರಿಯತ್ತ ಸಾಗೋಣ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಕರೆ ನೀಡಿದರು.

ನಗರಕ್ಕೆ ಸಮೀಪದ ಆವರಗೆರೆಯಲ್ಲಿ ಕಾಂ. ಶೇಖರಪ್ಪ ಮತ್ತು ಸುರೇಶ್ ಅವರ 52 ನೇ ಹುತಾತ್ಮರ ದಿನಾಚರಣೆ ಹಾಗೂ ಹಿರಿಯ ಕಾರ್ಮಿಕ ಮುಖಂಡರು, ಮಾಜಿ ಶಾಸಕ ಪಂಪಾಪತಿ ಅವರ 20ನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶೋಷಣೆ ರಹಿತ ಸಮಾಜಕ್ಕಾಗಿ ದುಡಿದ ಹುತಾತ್ಮ ಮುಖಂಡರ ಆದರ್ಶಗಳನ್ನು ಜೀವನದಲ್ಲಿ ಸದಾ ಅಳವಡಿಸಿಕೊಂಡು ಶೋಷಣೆ ರಹಿತ ಸಮಾಜಕ್ಕಾಗಿ ಹೋರಾಟ ಮುಂದುವರೆಸೋಣ ಎಂದು ತಿಳಿಸಿದರು.

ಹಿರಿಯ ಕಾರ್ಮಿಕ ಮುಖಂಡ ಆನಂದ ರಾಜ್ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಎಐಟಿಯುಸಿ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯರಿ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಜಿ. ಉಮೇಶ್, ಮುಖಂಡರುಗಳಾದ ಎಂ.ಬಿ. ಶಾರದಮ್ಮ, ಜಬೀನಾ ಖಾನಂ, ಶೇಖರಪ್ಪ ನವರ ಪುತ್ರರು, ನಿವೃತ್ತ ಉಪನ್ಯಾಸಕ ಬಸವರಾಜ್, ಪಂಪಾಪತಿಯವರ ಪುತ್ರರು, ಉಪನ್ಯಾಸಕ ಡಾ.ಸುರೇಶ್ ಬಾಬು, ಹೆಚ್. ಕೆ. ಕೊಟ್ರಪ್ಪ, ಆವರಗೆರೆ ವಾಸು ಮಾತನಾಡಿದರು.

ಟಿ.ಎಸ್. ನಾಗರಾಜ್, ಮಹಮದ್ ರಫೀಕ್, ವಿ. ಲಕ್ಷ್ಮಣ ಸೇರಿದಂತೆ ಇತರರು ಇದ್ದರು. ಆರಂಭದಲ್ಲಿ ಇಪ್ಟಾ ಗೆಳೆಯರು ಜಾಗೃತಿ ಗೀತೆಗಳನ್ನು ಹಾಡಿದರು. ಕೆ. ಬಾನಪ್ಪ ಸ್ವಾಗತಿಸಿದರು, ಎ. ತಿಪ್ಪೇಶ್ ವಂದಿಸಿದರು.

error: Content is protected !!