ರಾಜ್ಯ ಮಟ್ಟದ ವೇಯ್ಟ್ ಲಿಫ್ಟಿಂಗ್‌ ಕ್ರೀಡಾಕೂಟಕ್ಕೆ ಪ್ರಶಾಂತ್ ಆಯ್ಕೆ

ರಾಜ್ಯ ಮಟ್ಟದ ವೇಯ್ಟ್ ಲಿಫ್ಟಿಂಗ್‌ ಕ್ರೀಡಾಕೂಟಕ್ಕೆ ಪ್ರಶಾಂತ್ ಆಯ್ಕೆ

ದಾವಣಗೆರೆ, ಅ. 24- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ತುರ್ಚಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಿನ್ನೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ  ದಾವಣಗೆರೆ ದಕ್ಷಿಣದಿಂದ ವೇಯ್ಟ್ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಡಿಆರ್‌ಆರ್ ಶಾಲೆಯ ವಿದ್ಯಾರ್ಥಿ ಎಂ. ಪ್ರಶಾಂತ್ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಾಳೆ ದಿನಾಂಕ 25 ಮತ್ತು 26 ರಂದು ಮಂಗಳೂರಿನ ವಿಟ್ಲದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳಿದ್ದು, ಈ ವಿದ್ಯಾರ್ಥಿ ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಪಾಲಿಕೆ ವಾಹನ  ಚಾಲಕ ಮಂಜಪ್ಪ ಇವರ ಪುತ್ರ.  

ಪ್ರಶಾಂತ್ ರಾಜ್ಯಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಲೆಂದು  ಅಂತರರಾಷ್ಟ್ರೀಯ ಕ್ರೀಡಾಪಟು, ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್, ವೇಯ್ಟ್ ಲಿಫ್ಟಿಂಗ್ ಸಂಸ್ಥೆ ಅಧ್ಯಕ್ಷ ಬಸವರಾಜ್, ತರಬೇತುದಾರರಾದ ಹನುಮಂತ, ಸಂತೋಷ್ ಕಾಟೆ, ರಾಘವೇಂದ್ರ ಅಭಿನಂದಿಸಿದ್ದಾರೆ. 

error: Content is protected !!