ವಾಲ್ಮೀಕಿ ಮುನಿಗಳ ಸ್ತಬ್ದ ಚಿತ್ರದ ಮೆರವಣಿಗೆ

ವಾಲ್ಮೀಕಿ ಮುನಿಗಳ ಸ್ತಬ್ದ ಚಿತ್ರದ ಮೆರವಣಿಗೆ

ದಾವಣಗೆರೆ, ಅ.18- ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ಮುನಿಗಳ ಸ್ತಬ್ದ ಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ನಗರದ ಜಯಚಾಮರಾಜ ವೃತ್ತದಲ್ಲಿ ಪದ್ಮಾವತಿ ಮೆರವಣಿಗೆಗೆ ಚಾಲನೆ ನೀಡಿದರು.

ಡೊಳ್ಳು, ಕೋಲಾಟ, ನಾಸಿಕ್‌ ಡೋಲ್‌ ಮತ್ತು ಬೃಹತ್‌ ಗೊಂಬೆಗಳು ಎಲ್ಲರನ್ನು ಆಕರ್ಷಿಸಿದವು. ವಾಲ್ಮೀಕಿ ಭಾವ ಚಿತ್ರವಿರುವ ಬೃಹತ್‌ ಬಾವುಟಗಳು ಮೆರವಣಿಗೆಯಲ್ಲಿ ರಾರಾಜಿಸಿದವು. 

ಈ ವೇಳೆ ಹುಚ್ಚವ್ವನಹಳ್ಳಿ ಮಂಜುನಾಥ್‌, ಸಮಿತಿಯ ನಳಿನ ಕಿತ್ತೂರು, ಶೃತಿ, ದೇವರಮನೆ ಮಹೇಶ್,  ತಾ.ಪಂ. ಮಾಜಿ ಸದಸ್ಯ ಗುಮ್ಮನೂರು ಶಂಭಣ್ಣ, ಉದ್ಯಮಿ ಜ್ಞಾನೇಶ್ವರ್, ರೈತ ಸಂಘದ ಮುಖಂಡರಾದ ಯರವನಾಗತಿಹಳ್ಳಿ ಪರಮೇಶ್ವರಪ್ಪ, ಪಾಮೇನಹಳ್ಳಿ ಗೌಡರ ಶೇಖರಪ್ಪ, ಚಿಕ್ಕಮಲ್ಲನಹೊಳೆ ಚಿರಂಜೀವಿ ಮತ್ತಿತರರಿದ್ದರು.

error: Content is protected !!