ಪ್ರಸಂಗ ಬಂದರೆ ನಾನೂ ಸಿಎಂ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ: ಎಸ್ಸೆಸ್

ಪ್ರಸಂಗ ಬಂದರೆ ನಾನೂ ಸಿಎಂ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ: ಎಸ್ಸೆಸ್

ದಾವಣಗೆರೆ, ಸೆ. 11- ಮುಖ್ಯಮಂತ್ರಿ ಬದಲಾವಣೆ ಪ್ರಸಂಗ ಬಂದರೆ ನಾನೂ ಸ್ಪರ್ಧಿಸುತ್ತೇನೆ ಎಂದು ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಜ್ಯೂನಿಯರ್, ಸೀನಿಯರ್ ಎನ್ನುವ ಪ್ರಶ್ನೆ  ಬರುವುದಿಲ್ಲ. 

ಶಾಸಕರು ಯಾರಿಗೆ ಬಹುಮತ ನೀಡುತ್ತಾರೋ ಅವರಿಗೆ ಹೈ ಕಮಾಂಡ್ `ಎಸ್’ ಎನ್ನುವುದು ರೂಢಿ ಎಂದು ಸ್ಪಷ್ಟಪಡಿಸಿದರು. 

ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ. ಹೈಕಮಾಂಡ್ ಆಶೀರ್ವಾದ ಇರುವವರೆಗೂ ಅವರೇ ಅಧಿಕಾರ ಮಾಡಲಿ ಎಂದ ಅವರು,  ಕೆಲವರು ಬಾಯಿಗೆ ಬಂದಂತೆ ಮಾತನಾಡಿ ಹಗುರಾಗುತ್ತಾರಷ್ಟೇ ಎಂದು ಹೇಳಿದರು.

error: Content is protected !!