ಅಂಬಿಗರ ಚೌಡಯ್ಯ ಪೀಠದಲ್ಲಿ ರಥೋತ್ಸವ

ಅಂಬಿಗರ ಚೌಡಯ್ಯ ಪೀಠದಲ್ಲಿ ರಥೋತ್ಸವ

ಕುಂಬಳೂರಿನ ಸದ್ಭಕ್ತರಿಂದ 101 ಕ್ವಿಂಟಾಲ್‌ ಅಕ್ಕಿ ಸಮರ್ಪಣೆ

ಮಲೇಬೆನ್ನೂರು, ಜ.12- ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನಾಡಿದ್ದು ದಿನಾಂಕ 14 ಮತ್ತು 15 ರಂದು ನಡೆಯಲಿರುವ ಅಂಬಿಗರ ಚೌಡಯ್ಯನವರ 5ನೇ ಶರಣ ಸಂಸ್ಕೃತ ಉತ್ಸವ, ವಚನ ಗ್ರಂಥ ಮಹಾರಥೋತ್ಸವ, ಚೌಡಯ್ಯನವರ 903ನೇ ಜಯಂತ್ಯೋತ್ಸವ,  ಶ್ರೀ ಶಾಂತಮುನಿಶ್ರೀಗಳವರ 7ನೇ ಸ್ಮರಣೋತ್ಸವ ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ  ಪಟ್ಟಾಭಿಷೇಕದ 7ನೇ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಕುಂಬಳೂರಿನ ಗಂಗಾಮತ ಸಮಾಜದವರ 101 ಕ್ವಿಂಟಾಲ್‌ ಅಕ್ಕಿ ಸಮರ್ಪಿಸಿದ್ದಾರೆ. 

ಸಮಾಜದ ಮುಖಂಡರಾದ ಎಂ.ಹೆಚ್‌. ಪರಮೇಶ್ವರಪ್ಪ, ಆರ್.ಹೆಚ್‌. ಬಸವರಾಜ್‌, ಕರಡೇರ ಸೋಮಪ್ಪ, ಕೆ. ಪುಟ್ಟಪ್ಪ, ಕಡೇಮನಿ ಬಸವರಾಜ್‌, ಬಲ್ಲೂರು ತಿಪ್ಪೇಶ್‌, ಜಯ್ಯಪ್ಪ, ಬೆನ್ನೂರು ಕರಿಬಸಪ್ಪ, ಆರ್.ವೈ. ಹನುಮಂತಪ್ಪ, ಹಲಸಬಾಳು ನಿಂಗಪ್ಪ, ಕೆ. ಹನುಮೇಶ್‌, ಬಾರ್ಕಿ ಹನುಮಂತಪ್ಪ ಮತ್ತಿತರರು ಅಕ್ಕಿ ಸಮರ್ಪಣೆ ವೇಳೆ ಹಾಜರಿದ್ದರು.

error: Content is protected !!