ಇಸ್ಕಾನ್‌ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

ಇಸ್ಕಾನ್‌ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

ದಾವಣಗೆರೆ, ಆ. 26- ಅಂತರ್ ರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ದಾವಣಗೆರೆ ಘಟಕದ ವತಿಯಿಂದ ಇಲ್ಲಿನ ವಿನೋಬನಗರದ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಸಂಜೆ 5 ರಿಂದ ರಾತ್ರಿ 12ರವರೆಗೆ ಮಂಗಳಾರತಿ, ಭಜನೆ, ಅಭಿಷೇಕ, ನೃತ್ಯ, ಪೂರಕ, ಪ್ರವಚನ ಕಾರ್ಯಕ್ರಮಗಳು ನಡೆದವು.

error: Content is protected !!