ರಸ್ತೆಗೆ ಹಾಕಿದ ಚರಂಡಿ ಹೊದಿಕೆ ಕಲ್ಲು ಸರಿಪಡಿಸಿ

ರಸ್ತೆಗೆ ಹಾಕಿದ ಚರಂಡಿ ಹೊದಿಕೆ ಕಲ್ಲು ಸರಿಪಡಿಸಿ

ಮಾನ್ಯರೇ, 

ವಿನೋಬ ನಗರದ 1ನೇ ಮುಖ್ಯ ರಸ್ತೆ, 11ನೇ ಅಡ್ಡ ರಸ್ತೆಯಲ್ಲಿನ ಚರಂಡಿಯ ಮೇಲೆ ಹೊದಿಸಿದ ಕಲ್ಲುಗಳನ್ನು ಪಾಲಿಕೆಯವರು ತೆಗೆದು ರಸ್ತೆಗೆ ಹಾಕಿದ್ದು, 3-4 ತಿಂಗಳು ಕಳೆದರೂ ಅದನ್ನು ಸರಿಪಡಿಸಲು ಪಾಲಿಕೆ ಮುಂದಾಗಿಲ್ಲ.

ಇಂದಿಗೂ ರಸ್ತೆಯಲ್ಲೇ ಇರುವ ಕಲ್ಲುಗಳಿಂದ ಅನೇಕ ಅಪಘಾತಗಳು ಸಂಭವಿಸಿದ್ದು, ಈ ಬಗ್ಗೆ ಪಾಲಿಕೆ ಸಿಬ್ಬಂದಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ನಾಗರಿಕರ ಮಾತು ಅವರ ಕಿವಿಗೆ ತಾಗುತ್ತಿಲ್ಲ. ಕೂಡಲೇ ಕಲ್ಲುಗಳನ್ನು ಚರಂಡಿ ಮೇಲೆ ಹಾಕಿಸಿ, ಸಂಚಾರಕ್ಕೆ ಅಡಚಣೆ ಆಗುತ್ತಿರುವುದನ್ನು ಸರಿಪಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಪಾಲಿಕೆ ಆಯುಕ್ತರಲ್ಲಿ ವಿನಂತಿ.

ಎಚ್‌. ದಿವಾಕರ್‌, ವಕೀಲರು, ದಾವಣಗೆರೆ.

error: Content is protected !!