ಬಾತಿ ಕೆರೆಗೆ ತಡೆ ಗೋಡೆ, ವಿದ್ಯುತ್ ದೀಪ ನಿರ್ಮಿಸಿ..!

ಮಾನ್ಯರೇ,

ದಾವಣಗೆರೆ ಹಾಗೂ ಹರಿಹರದ ಮಾರ್ಗ ಮಧ್ಯೆ ಇರುವ ದೊಡ್ಡಬಾತಿ ಸಮೀಪದ ಕೆರೆಗೆ ತಡೆ ಗೋಡೆ ಇಲ್ಲದಿರುವುದು ಸಂಚಾರಿಗಳಿಗೆ ಸಂಕಟ ತಂದಿದೆ.

ಕೆರೆಯ ದಂಡೆಗೆ ಅಂಟಿಕೊಂಡ ದಾವಣಗೆರೆ ಮತ್ತು ಹರಿಹರ ಸಂಪರ್ಕಿಸುವ ರಸ್ತೆ 1 ಕಿ.ಮೀ ವ್ಯಾಪ್ತಿ ಹೊಂದಿದ್ದು, ಇಲ್ಲಿ ನಿತ್ಯವೂ ಸಾವಿರಾರು ಜನ ಪ್ರಯಾಣಿಸುತ್ತಾರೆ. ಈ ವೇಳೆ ಅಪಾಯ ಸಂಭವಿಸಿದರೆ ಪ್ರಾಣ ಹಾನಿಯಾಗುವ ಸಾಧ್ಯತೆ ಕಾಣುತ್ತಿದೆ. 

ಹಾಗೆಯೇ ರಾತ್ರಿ ಸಮಯದಲ್ಲಿ ಕೆರೆಯ ಮೇಲಿರುವ ರಸ್ತೆಯಲ್ಲಿ ಬೀದಿ ದೀಪದ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯುದ್ದವೂ ಸಂಪೂರ್ಣ ಕತ್ತಲು ಆವರಿಸುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡುತ್ತಿದ್ದೇನೆ.

– ಎಸ್.ಎಚ್‌. ಷಣ್ಮುಖ, ಹಳೇಬಾತಿ.

error: Content is protected !!