ಕೆಲಸವಿಲ್ಲದ ಬಿಜೆಪಿಯವರಿಂದ ಪ್ರತಿಭಟನೆ : ಎಸ್ಸೆಸ್ ತಿರುಗೇಟು

ಕೆಲಸವಿಲ್ಲದ ಬಿಜೆಪಿಯವರಿಂದ ಪ್ರತಿಭಟನೆ : ಎಸ್ಸೆಸ್ ತಿರುಗೇಟು - Janathavaniದಾವಣಗೆರೆ, ಡಿ.30- ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ಹಾಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೆಲಸವಿಲ್ಲದವರು ಅವರು ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಛೇಡಿಸಿದರು.

ಅವರು, ಇಂದು ನಗರದ ಬಾಪೂಜಿ ಕಾಲೇಜಿನ ಎಂಬಿಎ ಕಾಲೇಜು ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಂದಾದರೂ ಆಕಳು, ಕುದುರೆ, ಎತ್ತು ಸಾಕಿದ್ದಾರಾ? ಆಗ ಗೊತ್ತಾಗುತ್ತಿತ್ತು ಎಂದು ಹೇಳುವ ಮೂಲಕ ವನ್ಯಜೀವಿ ಪತ್ತೆ ಪ್ರಕರಣ ಸಂಬಂಧ ಹೋರಾಟ ಮಾಡುತ್ತಿರುವ ಜಿಲ್ಲಾ ಬಿಜೆಪಿ ನಾಯಕರ ವಿರುದ್ಧ ತಿರುಗೇಟು ನೀಡಿದರು.

ನಮ್ಮ ಬಳಿ ನೂರು ಹಸುಗಳಿವೆ. 40 ಕುದುರೆಗಳಿವೆ. ಇದಕ್ಕಿಂತ ಹೆಚ್ಚೇನು ಮಾತನಾಡಲ್ಲ ಎಂದರು.

ಪಂಚಮಸಾಲಿ ಸಮಾಜಕ್ಕೆ ನೀಡಿರುವ ಹಾಗೂ ಲಿಂಗಾಯತರಿಗೆ ಸರ್ಕಾರ ಘೋಷಿಸಿರುವ ಮೀಸಲಾತಿ ಎಲ್ಲವೂ ತಿರುಗ ಮುರುಗ ಆಗಿದೆ. ನಾವಂದುಕೊಂಡಂತೆ ಮೀಸಲಾತಿ ನೀಡಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.

error: Content is protected !!