ದಾವಣಗೆರೆ ನಿಟುವಳ್ಳಿ ಹೊಸ ಬಡಾವಣೆ ವಾಸಿ ನಿವೃತ್ತ ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕರಾದ ಕಬ್ಬಳ್ಳಿ ಶ್ರೀ ಕೆ.ಎಸ್.ಬಸವರಾಜಪ್ಪ ಇವರ ಧರ್ಮಪತ್ನಿ ಶ್ರೀಮತಿ ಜಿ.ಪಿ.ನಾಗರತ್ನಮ್ಮ ಇವರು ದಿನಾಂಕ 20.5.2024ರ ಸೋಮವಾರ ರಾತ್ರಿ 11.23 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 69 ವರ್ಷ ವಯಸ್ಸಾಗಿತ್ತು. ಪತಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಿನಾಂಕ 21.05.2024 ರ ಬೆಳಿಗ್ಗೆ 10.30ರವರೆಗೆ ದಾವಣಗೆರೆ ನಿಟ್ಟುವಳ್ಳಿ ಹೊಸ ಬಡಾವಣೆಯಲ್ಲಿನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಮೃತರ ಅಂತ್ಯಕ್ರಿಯೆಯನ್ನು ಮಧ್ಯಾಹ್ನ 3ಕ್ಕೆ ದಾವಣಗೆರೆ ತಾಲ್ಲೂಕು ಹೆಮ್ಮನಬೇತೂರಿನ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024