ಅಂತರ್‌ ಜಿಲ್ಲಾ ಕಳ್ಳನ ಬಂಧನ

ಅಂತರ್‌ ಜಿಲ್ಲಾ ಕಳ್ಳನ ಬಂಧನ

ದಾವಣಗೆರೆ, ಮೇ 9- ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಬಂಗಾರ, ಬೆಳ್ಳಿ, ಹಣ ಕಳ್ಳತನ ಮಾಡುತ್ತಿದ್ದ 4 ಜನ ಕಳ್ಳರ ಪೈಕಿ ಒಬ್ಬನನ್ನು ಬಿಳಿಚೋಡು ಪೊಲೀಸಲು ಬಂಧಿಸಿದ್ದಾರೆ.

ಬಂಧಿತನಿಂದ 2,38,472ರೂ. ಮೌಲ್ಯದ 45ಗ್ರಾಂ. 860 ಮಿಲಿ ತೂಕದ ಬಂಗಾರದ ವಡವೆ, 7,554ರೂ. ಮೌಲ್ಯದ 109 ಗ್ರಾಂ. ಬೆಳ್ಳಿ ವಡವೆ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್‌ ಬೈಕ್‌ ಹಾಗೂ ಆಕ್ಸೆಲ್‌ ಬ್ಲೇಡ್‌ ವಶಪಡಿಸಿಕೊಂಡಿದ್ದಾರೆ.

ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ವಿಜಯ್‌ ಕುಮಾರ್‌ ಎಂ ಸಂತೋಷ್‌, ಪೊಲೀಸ್‌ ಉಪಾಧೀಕ್ಷಕ ಪ್ರಶಾಂತ್‌ ಸಿದ್ಧನಗೌಡರ್‌ ಇವರ ಮಾರ್ಗದರ್ಶನದಲ್ಲಿ ಪೊಲೀಸ್‌ ನಿರೀಕ್ಷಕ ಸೋಮಶೇಖರ್‌ ಕೆಂಚರೆಡ್ಡಿ ಹಾಗೂ ಠಾಣೆಯ ಸಿಬ್ಬಂದಿ ಗಳಾದ ಆರ್‌.ಎ. ಕೃಷ್ಣಮೂರ್ತಿ, ಪಿ. ತಿಪ್ಪೇಸ್ವಾಮಿ, ಎಚ್‌. ಎಸ್. ಸ್ವಾಮಿ, ಜೆ.ಜೆ. ಬಸವರಾಜ್‌, ರಾಜು ಕೊಡದರ, ಭೋವಿ ಹನುಮಂತಪ್ಪ, ಸಿದ್ಧಲಿಂಗೇಶ, ಅಶೋಕ್‌, ಡಿ. ಇಸ್ಮಾಯಿಲ್‌ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. 

error: Content is protected !!