ರಂಗೇರಿದ ಕುಸ್ತಿ ಅಖಾಡ, ಕುಸ್ತಿ ಪ್ರಿಯರಿಗೆ ರಸದೌತಣ

ರಂಗೇರಿದ ಕುಸ್ತಿ ಅಖಾಡ, ಕುಸ್ತಿ ಪ್ರಿಯರಿಗೆ ರಸದೌತಣ

ದಾವಣಗೆರೆ, ಮಾ. 22- ನಗರ ದೇವತೆ ದುಗ್ಗಮ್ಮ ಜಾತ್ರೆ ಅಂಗವಾಗಿ ಇಂದಿನಿಂದ ನಗರದ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಕುಸ್ತಿ ಪಂದ್ಯಾವಳಿಗಳು ಆರಂಭವಾಗಿವೆ.

ಜಟ್ಟಿಗಳು ತೊಡೆ ತಟ್ಟುವ ಕ್ಷಣಕ್ಕಾಗಿ ಕಾತರರಾಗಿದ್ದ ಕುಸ್ತಿ ಪ್ರಿಯರಿಗೆ ಮೊದಲ ದಿನವೇ ಜಟ್ಟಿಗಳು ರಸದೌತಣ ನೀಡಿದ್ದಾರೆ. ಆವರಣದಲ್ಲಿ ನೂರಾರು ಕುಸ್ತಿ ಪ್ರೇಮಿಗಳು ಕುತೂಹಲದಿಂದ ಇಂದಿನ ಪಂದ್ಯಗಳನ್ನು ವೀಕ್ಷಿಸಿದರು. ಮೂರು ದಿನಗಳ ಕಾಲ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ ತೊಡೆ ತಟ್ಟಲು ಹೊರ ರಾಜ್ಯದ ಪಂಜಾಬ್‌, ದಿಲ್ಲಿ, ಮಹಾರಾಷ್ಟ್ರ, ಹರಿಯಾಣ ಸೇರಿ ಕರ್ನಾಟಕ ರಾಜ್ಯದ ಮೂಲೆ, ಮೂಲೆಗಳಲ್ಲಿರುವ ಜಗ ಜಟ್ಟಿಗಳು ಈಗಾಗಲೇ ನಗರಕ್ಕೆ ಆಗಮಿಸಿದ್ದಾರೆ. 

error: Content is protected !!