ವೊಡ್ಡಿನಹಳ್ಳಿಯಲ್ಲಿ ಸಿಆರ್ಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವೀರೇಂದ್ರ ಕುಮಾರ್
ದಾವಣಗೆರೆ, ಫೆ. 21 – ಪ್ರತಿಯೊಂದು ರಾಜ್ಯದಲ್ಲೂ ದಿವ್ಯಾಂಗ ಜನರ ಕಲ್ಯಾಣಕ್ಕಾಗಿ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿ.ಆರ್.ಸಿ.) ಸ್ಥಾಪಿಸಲಾಗುವುದು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ತಿಳಿಸಿದ್ದಾರೆ.
ನಗರ ಸಮೀಪದ ವೊಡ್ಡನಹಳ್ಳಿಯಲ್ಲಿ ಸಿ.ಆರ್.ಸಿ. ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆನ್ಲೈನ್ ಮೂಲಕ ಪಾಲ್ಗೊಂಡು ಅವರು ಮಾತನಾಡಿದರು.
ಈ ಕೇಂದ್ರದಿಂದ ದಿವ್ಯಾಂಗರಿಗೆ ಸರ್ಕಾರಿ ಯೋಜನೆಗಳ ಲಾಭ ಸಿಗಲಿದೆ ಹಾಗೂ ವಿಶೇಷ ಶಿಕ್ಷಣವೂ ಸಿಗಲಿದೆ. ಫಿಸಿಯೋಥೆರಪಿ ಇತ್ಯಾದಿ ಚಿಕಿತ್ಸೆಗಳೂ ಸಿಗಲಿವೆ ಎಂದವರು.
ಡಿಪ್ಲೋಮಾ, ಆರಂಭಿಕ ಹಂತದಲ್ಲೇ ಅಂಗವೈಕಲ್ಯ ಗುರುತಿಸುವ ಸೌಲಭ್ಯ
ದಾವಣಗೆರೆ, ಫೆ. 21 – ನಗರದ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿ.ಆರ್.ಸಿ.) 25 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ಹೊಂದಿದೆ. ಈ ಕೇಂದ್ರಕ್ಕೆ 58.5 ಕೋಟಿ ರೂ.ಗಳ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಅನುದಾನಕ್ಕೆ ಕ್ರಮ ತೆಗೆದುಕೊಳ್ಳಲಾ ಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರ ಸಮೀಪದ ವೊಡ್ಡಿನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಸಂಯುಕ್ತ ಪ್ರಾದೇಶಿಕ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮಕ್ಕಳಲ್ಲಿನ ಅಂಗವೈಕಲ್ಯ ತಡೆಗಾಗಿ ಸಿ.ಆರ್.ಸಿ. ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆರಂಭಿಕ ಹಂತದಲ್ಲೇ ಅಂಗವೈಕಲ್ಯವನ್ನು ಗುರುತಿಸಿ, ಅಂಗವೈಕಲ್ಯ ನಿವಾರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕರ್ನಾಟಕ ಹಾಗೂ ಗೋವಾ ಸೇರಿ ಒಂದು ಸಿ.ಆರ್.ಸಿ. ಕೇಂದ್ರವಿದ್ದು, ಅದು ದಾವಣಗೆರೆಯಲ್ಲಿರುವುದರಿಂದ ಎರಡೂ ರಾಜ್ಯಗಳ ಜನರಿಗೆ ನೆರವಾಗುತ್ತಿದೆ. ಈ ಕೇಂದ್ರದಲ್ಲಿ ದಿವ್ಯಾಂಗರಿಗೆ ಸಂಬಂಧಿಸಿದ ಡಿಪ್ಲೋಮಾ ತರಗತಿಯನ್ನೂ ಆರಂಭಿಸಲಾಗಿದೆ ಎಂದು ಸಿದ್ದೇಶ್ವರ ಹೇಳಿದರು.
ಈ ಕೇಂದ್ರ ಆರಂಭಿಸಲು ಮುಂದಾದಾಗ, ಕೆಲವರು ಹುಚ್ಚಾಸ್ಪತ್ರೆ ತರುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಆದರೆ, ದಿವ್ಯಾಂಗರು ದೇವರ ಮಕ್ಕಳಿದ್ದಂತೆ. ದಿವ್ಯಾಂಗರ ಕಷ್ಟ ಅವರನ್ನು ಹೆತ್ತವರಿಗೆ ಗೊತ್ತಿರುತ್ತದೆ. ಅಂತಹ ಮಕ್ಕಳಿಗೆ ನೆರವಾಗಲು ಕೇಂದ್ರ ಸ್ಥಾಪಿಸಿದ್ದು ತಮಗೆ ಸಂತೋಷ ತಂದಿದೆ ಎಂದರು.
16.27 ಎಕರೆ ಪ್ರದೇಶದಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ. ಇದಕ್ಕೂ ಮುಂಚೆ ದೇವರಾಜ ಅರಸು ಬಡಾವಣೆಯಲ್ಲಿ 2017ರಿಂದ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯವರೆಗೆ 5,881 ಜನರು ನೆರವು ಪಡೆದಿದ್ದಾರೆ. 4,169 ಜನರಿಗೆ ಸಲಕರಣೆಗಳನ್ನು ವಿತರಿಸಲಾಗಿದೆ. 699 ಜನರಿಗೆ ಗಾಲಿ ಕುರ್ಚಿ ಹಾಗೂ 645 ಜನರಿಗೆ ಶ್ರವಣ ಯಂತ್ರ ವಿತರಿಸಲಾಗಿದೆ. ಇದರ ಜೊತೆಗೆ 53,625 ವಿಕಲಚೇತನರು ಹಾಗೂ ಪೋಷಕರಿಗೆ ತರಬೇತಿ ನೀಡಲಾಗಿದೆ ಎಂದರು.
ಸ್ವಂತ ಕಟ್ಟಡದಿಂದ ಹೆಚ್ಚು ಜನರಿಗೆ ನೆರವು ನೀಡಲು ಸಾಧ್ಯವಾಗಲಿದೆ. ಕೇಂದ್ರಕ್ಕೆ ಒಟ್ಟಾರೆ 58.5 ಕೋಟಿ ರೂ.ಗಳ ಅಗತ್ಯವಿದೆ. ಇದುವರೆಗೂ 25 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಪೂರ್ಣ ಆಗಿದೆ. ಉಳಿದ ಅನುದಾನಕ್ಕೂ ಪ್ರಯತ್ನ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಂಸದರು ಹೇಳಿದರು.
ಈ ಸಂದರ್ಭದಲ್ಲಿ ಸಿಕಂದರಾಬಾದ್ನ ಎನ್ಐಇಪಿಐಡಿಯ ಸಮುದಾಯ ಪುನರ್ವಸತಿ ವಿಭಾಗದ ಮುಖ್ಯಸ್ಥ ಗಣೇಶ್ ಶೇರೆಗಾರ್ ಮಾತನಾಡಿ, ವಿಶೇಷ ಚೇತನರಿಗಾಗಿ ರಾಜ್ಯಾದ್ಯಂತ ಅಧಿಕಾರಿಗಳಿದ್ದಾರೆ. ಅವರಿಗೆ ಸಿ.ಆರ್.ಸಿ. ಮೂಲಕ ವಿಶೇಷ ತರಬೇತಿ ನೀಡಲಾಗುವುದು ಎಂದರು.
ಇದಕ್ಕೂ ಮುಂಚೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ಆನ್ಲೈನ್ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ವೇದಿಕೆಯ ಮೇಲೆ ಉಪ ಮೇಯರ್ ಯಶೋಧ ಯಗ್ಗಪ್ಪ, ಅಪರ ಜಿಲ್ಲಾಧಿಕಾರಿ ಸೈಯಿದಾ ಅಫ್ರಿನ್ ಬಾನು, ಸಿ.ಆರ್.ಸಿ. ನಿರ್ದೇಶಕಿ ಮೀನಾಕ್ಷಿ, ಮುಖಂಡರಾದ ಎ.ವೈ. ಪ್ರಕಾಶ್, ರಾಜನಹಳ್ಳಿ ಶಿವಕುಮಾರ್, ಅಣಬೇರು ಜೀವನಮೂರ್ತಿ, ಎಸ್.ಟಿ. ವೀರೇಶ್, ಪ್ರಸನ್ನ ಕುಮಾರ್, ಗಂಗಾಧರ, ಭಾಗ್ಯಮ್ಮ, ಸಂಗಣ್ಣ, ಪ್ರಭಾವತಿ, ವೈ.ಎಂ. ನಾಗರಾಜ್, ಶ್ರೀನಿವಾಸ ದಾಸಕರಿಯಪ್ಪ, ಅನಿಲ್ ಕುಮಾರ್, ನಾಗರಾಜ್, ವೀಣಾ ನಂಜಪ್ಪ, ಶ್ರೀನಿವಾಸ್, ಎನ್.ಎ. ಮುರುಗೇಶ್ ಮತ್ತಿತರರು ಉಪಸ್ಥಿತರಿದ್ದರು.
ಮಗನಿಗೆ ಟಿಕೆಟ್ ಏಕಾಗಬಾರದು?
ಸಂಸದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ, ಫೆ. 21 – ನನ್ನ ಮಗನಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಸಿಗುವುದು ಭಗವಂತನ ಇಚ್ಛೆಗೆ ಬಿಟ್ಟಿದ್ದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
ನಿಮ್ಮ ಪುತ್ರ ಜಿ.ಎಸ್. ಅನಿತ್ ಕುಮಾರ್ ಅವರಿಗೆ ಲೋಕಸಭಾ ಟಿಕೆಟ್ಗಾಗಿ ಪ್ರಯತ್ನ ನಡೆಸುತ್ತಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮಗ ಏಕಾಗಬಾರದು? ಎಂದು ಮರು ಪ್ರಶ್ನಿಸಿದರು.
ಈ ಹಿಂದೆ ನಾನು ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳಿರಲಿಲ್ಲ. ಈಗಲೂ ಕೇಳಿಲ್ಲ. ನನ್ನ ಕುಟುಂಬದವರಿಗೂ ಟಿಕೆಟ್ ಕೇಳಿಲ್ಲ. ಹೈಕಮಾಂಡ್ ಟಿಕೆಟ್ ನೀಡಿದರೆ ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಮಗನಿಗೆ ಟಿಕೆಟ್ ಕೊಟ್ಟರೆ ಒಂದೇ ಕುಟುಂಬದ ಮೂರನೇ ತಲೆಮಾರಿನವರಿಗೆ ಟಿಕೆಟ್ ಕೊಟ್ಟಂತಾಗುತ್ತದೆ ಎಂಬ ವಾದವನ್ನು ತಳ್ಳಿ ಹಾಕಿದ ಸಿದ್ದೇಶ್ವರ, ಆ ರೀತಿ ಹೇಳಲಾಗದು ಎಂದರು.
ನಾನು ಹೈಕಮಾಂಡ್ ಬಳಿ ಟಿಕೆಟ್ ಕೇಳಲು ಹೋಗಿಲ್ಲ. ಬೇರೆಯವರು ಕೇಳಲು ಹೋಗಿರಬಹುದು. ಟಿಕೆಟ್ಗಾಗಿ ಸ್ಪರ್ಧೆ ಇದ್ದೇ ಇರುತ್ತದೆ. ಈ ಬಾರಿ ಸ್ಪರ್ಧೆ ಪ್ರಬಲವಾಗಿದೆ ಎಂದು ಸಿದ್ದೇಶ್ವರ ಹೇಳಿದರು.
ಸಶಕ್ತೀಕರಣ, ಸ್ವಾವಲಂಬನೆ ಹಾಗೂ ಆತ್ಮನಿರ್ಭರತೆಗೆ ಸಿ.ಆರ್.ಸಿ.ಗಳು ನೆರವಾಗಲಿವೆ. ಸಿ.ಆರ್.ಸಿ. ಭವನಗಳ ಜೊತೆಗೆ ರಾಷ್ಟ್ರೀಯ ಸಂಸ್ಥೆಗಳ ಮೂಲಕವೂ ನಿರಂತರವಾಗಿ ದಿವ್ಯಾಂಗರ ಸಬಲೀಕರಣಕ್ಕೆ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು `ಸಬ್ಕಾ ಸಾಥ್’ ಎಂದು ಹೇಳುವಾಗ ಅದರಲ್ಲಿ ದಿವ್ಯಾಂಗರೂ ಪ್ರಮುಖ ಪಾತ್ರವಾಗಿದ್ದಾರೆ. ಅವರಿಗೆ ಸರಿಯಾದ ಅವಕಾಶ, ಉಪಕರಣಗಳು ದೊರೆತರೆ ಅವರಲ್ಲಿನ ದಿವ್ಯ ಪ್ರತಿಭೆ ಹೊರ ಬರಲಿದೆ. ಇದರಿಂದ ಅವರ ಕುಟುಂಬ, ಸಮಾಜ ಹಾಗೂ ರಾಷ್ಟ್ರಕ್ಕೆ ಕೊಡುಗೆ ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದರು.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಸಿ.ಆರ್.ಸಿ. ಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಒತ್ತಾಯಿಸಿದ್ದರು. ನಾನು ದೈಹಿಕವಾಗಿ ಅಲ್ಲಿ ಹಾಜರಾಗಲು ಸಾಧ್ಯವಾಗಿಲ್ಲದಿದ್ದರೂ, ಮಾನಸಿಕವಾಗಿ ಹಾಗೂ ಭಾವನಾತ್ಮಕಾಗಿ ನಿಮ್ಮೊಂದಿಗಿದ್ದೇನೆ ಎಂದು ವೀರೇಂದ್ರ ಕುಮಾರ್ ಹೇಳಿದರು.