ದಾವಣಗೆರೆ ಸಿಟಿ ಶ್ರೀನಿವಾಸ ನಗರ, 8ನೇ ಕ್ರಾಸ್ ವಾಸಿ ಶ್ರೀಮತಿ ಲಕ್ಷ್ಮಮ್ಮ ಶ್ರೀ ಆನಂದಪ್ಪ ಕುರಿಯವರ್ ರವರ ಜೇಷ್ಠ ಪುತ್ರ ಕುಬೇರ ಎ. ಕುರಿಯವರ್ (ಬಾಪೂಜಿ ಬ್ಯಾಂಕ್ ನೌಕರರು) ಇವರು ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 47 ವರ್ಷ ವಯಸ್ಸಾಗಿತ್ತು. ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 08.01.2024ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ನಗರದ ಲೇಬರ್ ಕಾಲೋನಿಯಲ್ಲಿರುವ ಆರ್.ಹೆಚ್. ಬೃಂದಾವನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
August 27, 2024