ನಗರದಲ್ಲಿ ಇಂದು ಅಂಚೆ ಜನಸಂಪರ್ಕ ಅಭಿಯಾನ

ಭಾರತೀಯ ಅಂಚೆ ಇಲಾಖೆ, ದಾವಣಗೆರೆ ಅಂಚೆ ವಿಭಾಗದ ವತಿಯಿಂದ ದೇವರಾಜ ಅರಸು ಬಡಾವಣೆ, ವಿನೋಬನಗರ, ಮಿನಿ ವಿಧಾನಸೌಧ ಹಾಗೂ ಬಿಎಲ್ ರೋಡ್ ಅಂಚೆ ಕಛೇರಿಗಳ ಸಹ ಭಾಗಿತ್ವದಲ್ಲಿ ಅಂಚೆ ಜನಸಂಪರ್ಕ ಅಭಿಯಾನ `ಅಂಚೆ ಕಛೇರಿ ಎಲ್ಲಾ ಸೇವೆಗಳು ಒಂದೇ ಸೂರಿ ನಡಿಯಲ್ಲಿ’ ಕಾರ್ಯಕ್ರಮವು ಇಂದು ನಡೆಯಲಿದೆ.

ಪಿಎಲ್ಐ, ಆರ್‌ಪಿಎಲ್ಐ ಮತ್ತು ಎಸ್‌ಬಿ, ಆರ್‌ಡಿ, ಎಂಎಸ್ಎಸ್‌ಸಿ ಖಾತೆ ಮತ್ತು ಐಪಿಪಿಬಿ ಖಾತೆಗಳ ತೆರೆಯುವಿಕೆ, ಆಧಾರ್ ಸೀಡಿಂಗ್, ಅಪಘಾತ ವಿಮೆ ಪಾಲಿಸಿಗಳು (GAG) ಮುಂತಾದ ಅಂಚೆ ಕಛೇರಿಯ ಸೇವೆಗಳು ಒಂದೇ ಸೂರಿನಡಿಯಲ್ಲಿ ಎಂಬ ಕಾರ್ಯಕ್ರಮ ನಡೆಯಲಿದ್ದು, ಸಾರ್ವ ಜನಿಕರು ಇದರ ಸದುಪಯೋಗಪಡಿಸಿಕೊಳ್ಳಲು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

error: Content is protected !!