ಅತಿಥಿ ಉಪನ್ಯಾಸಕರ ಪಂಜಿನ ಮೆರವಣಿಗೆ

ಅತಿಥಿ ಉಪನ್ಯಾಸಕರ ಪಂಜಿನ ಮೆರವಣಿಗೆ

ದಾವಣಗೆರೆ, ಡಿ.20- ರಾಜ್ಯದಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಆಗ್ರಹಿಸಿ, ಅತಿಥಿ ಉಪನ್ಯಾಸಕರು ನಗರದ ಡಾ. ಎಂ.ಸಿ. ಮೋದಿ ವೃತ್ತದಿಂದ ಪಂಜಿನ ಮೆರವಣಿಗೆ ನಡೆಸಿದರು.

ಜಿಲ್ಲೆಯ ಅತಿಥಿ ಉಪನ್ಯಾಸಕರು ಸರ್ಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಿದ್ದು, 27ನೇ ದಿನವಾದ ನಿನ್ನೆ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ಗುಂಡಿ ಸರ್ಕಲ್‌ನಿಂದ ಪ್ರಾರಂಭವಾಗಿ ವಿದ್ಯಾರ್ಥಿ ಭವನ, ಅಂಬೇಡ್ಕರ್‌ ಸರ್ಕಲ್‌ ಮೂಲಕ ಸಾಗಿ ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಸರ್ಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶ್ಯಾಮ್‌ಪ್ರಸಾದ್‌, ಜಗದೀಶ್ ಎಂ, ಶೋಭಾ ಎಸ್‌, ಸಿದ್ದೇಶ್‌ ಬಿ.ಜಿ, ರವೀಂದ್ರ, ಸಂತೋಷ್‌ಕುಮಾರ್‌, ಡಾ. ಪ್ರವೀಣ್‌ಕುಮಾರ್‌, ಈಶ್ವರಿ, ಯಶೋಧ, ಡಾ. ಸಂತೋಷ್‌, ಡಾ. ಧನಂಜಯ್‌ಮೂರ್ತಿ, ಸಂದೀಪ್‌, ಮಂಜುಳಾ, ಸಮರ್ಥರಾಮ್‌, ವಾಣಿ, ಮೋಹನ್‌, ಭಾರತಿ, ಪ್ರತಿಭಾ ಸೇರಿದಂತೆ ಇತರರು ಇದ್ದರು.

error: Content is protected !!