ಕೊಮಾರನಹಳ್ಳಿ : ಸಂಭ್ರಮದ ಕನಕ ಜಯಂತ್ಯೋತ್ಸವ

ಕೊಮಾರನಹಳ್ಳಿ : ಸಂಭ್ರಮದ ಕನಕ ಜಯಂತ್ಯೋತ್ಸವ

ಮಲೇಬೆನ್ನೂರು, ಡಿ.17- ಕೊಮಾರನಹಳ್ಳಿ ಗ್ರಾಮದಲ್ಲಿ ಕನಕ ಬ್ರಿಗೇಡ್ ವತಿಯಿಂದ ದಾಸಶ್ರೇಷ್ಠ ಶ್ರೀ ಭಕ್ತ  ಕನಕದಾಸರ 536ನೇ ಜಯಂತ್ಯೋತ್ಸವವನ್ನು ಭಾನುವಾರ ಸಂಜೆ ಸಂಭ್ರಮದಿಂದ ಆಚರಿಸಲಾಯಿತು.

ಗ್ರಾಮದ ಶ್ರೀ ಬೀರಲಿಂಗೇಶ್ವರ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳ ಬಳಿಯಿಂದ ಆರಂಭವಾದ ಶೋಭಾಯಾತ್ರೆಗೆ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡಿಜೆ ಸಂಗೀತಕ್ಕೆ ಯುವಕರು ಕುಣಿದು ಸಂಭ್ರಮಿಸಿದರು.

ಮಾಜಿ ಶಾಸಕ ಎಸ್.ರಾಮಪ್ಪ, ಇನ್‌ಸೈಟ್ಸ್ ಸಂಸ್ಥಾಪಕ ಬಿ.ಜಿ.ವಿನಯ್‌ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷರಾದ ಐರಣಿ ಅಣ್ಣಪ್ಪ, ಎಸ್.ಜಿ.ಪರಮೇಶ್ವರಪ್ಪ, ತಾ. ಕುರುಬ ಸಮಾಜದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮಡಿವಾಳರ ಬಸವರಾಜ್, ದಾನಪ್ಳ ಹನುಮಂತಪ್ಪ, ಎಸ್.ಎಂ.ಮಂಜುನಾಥ್, ಯುವ ಮುಖಂಡ ಅರಕೆರೆ ಅಮಿತ್, ವರ್ತಕ ಕೆ.ಉಜ್ಜೇಶ್, ಮಲೇಬೆನ್ನೂರು ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬೆಣ್ಣೆಹಳ್ಳಿ ಸಿದ್ದೇಶ್, ಕೆ.ಪಿ.ಗಂಗಾಧರ್, ಪಿ.ಆರ್.ರಾಜು, ಭೋವಿಕುಮಾರ್, ಪಿಎಸಿಎಸ್ ಮಾಜಿ ಅಧ್ಯಕ್ಷ ಪಿ.ಆರ್.ಕುಮಾರ್, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಗ್ರಾಮದ ಎಸ್.ಡಿ.ರಂಗನಾಥ್, ಕಟಿಗಿ ಹನುಮಂತಪ್ಪ, ಹೊಟೇಲ್ ಪರಮೇಶ್ವರಪ್ಪ, ಜಿ.ಅಜ್ಜಪ್ಪ, ಪೂಜಾರ್ ಚಂದ್ರಪ್ಪ, ಎಸ್.ಹೆಚ್.ಹಾಲೇಶ್, ಪಾರೇರ್ ಪರಮೇಶ್ವರಪ್ಪ, ಅಂಗಡಿ ಮಂಜಣ್ಣ, ಯಕ್ಕನಹಳ್ಳಿ ಮಂಜಣ್ಣ, ಕುಂಬಳೂರಿನ ಎಂ.ವಾಸುದೇವಮೂರ್ತಿ, ಜಿಗಳಿ ಹನುಮಗೌಡ, ಎ.ಕೆ.ನಾಗರಾಜ್, ಕನಕ ಬ್ರಿಗೇಡ್‌ನ ಜಿ.ಸುನೀಲ್, ಯು.ಅಣ್ಣಪ್ಪ, ಚೇತನ್, ವರುಣ್, ಸಂತೋಷ್, ಯು.ಹನುಮಂತ, ರಂಗನಾಥ್ ಚಾಟಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!