ಹೆಗಡೆ ನಗರ ನಿವಾಸಿಗಳ ವಾಸಕ್ಕೆ ಅವಕಾಶ ನೀಡಿದ್ದ ಬಡಾವಣೆ ಪರಿಶೀಲಿಸಿದ ಎಸ್ಸೆಸ್

ಹೆಗಡೆ ನಗರ ನಿವಾಸಿಗಳ ವಾಸಕ್ಕೆ ಅವಕಾಶ ನೀಡಿದ್ದ ಬಡಾವಣೆ ಪರಿಶೀಲಿಸಿದ ಎಸ್ಸೆಸ್

ದಾವಣಗೆರೆ, ಡಿ.8- ನಗರದ ರಿಂಗ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳನ್ನು ಮಹಾನಗರ ಪಾಲಿಕೆ ವತಿಯಿಂದ ಪ್ರತ್ಯೇಕ ಬಡಾವಣೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಈ ಸ್ಥಳಕ್ಕೆ ಶುಕ್ರವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಎಸ್ಪಿ ಉಮಾ ಪ್ರಶಾಂತ್, ನಗರ ಪಾಲಿಕೆ ಆಯುಕ್ತರಾದ ರೇಣುಕಾ, ನಗರಾಭಿವೃದ್ಧಿ ಪ್ರಾಧಿ ಕಾರದ ಆಯುಕ್ತರಾದ ಕೋಟೂರು ಬಸವನಗೌಡ, ಸ್ಮಾರ್ಟ್ ಸಿಟಿ ಎಂ.ಡಿ. ವೀರೇಶ್ ಕುಮಾರ್, ಬೆಸ್ಕಾಂನ ಪಾಟೀಲ್ ಮತ್ತು ಜಿ.ಎಂ.ನಾಯ್ಕ, ನಿರ್ಮಿತಿ ಕೇಂದ್ರದ ರವಿ ಮತ್ತು ಶಿವಕುಮಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. 

ನಿವೇಶನದಲ್ಲಿ ವಾಸವಿರುವ ನಿವಾಸಿಗಳ ಅಹ ವಾಲುಗಳನ್ನು ಸ್ವೀಕರಿಸಿದ ಶಾಸಕರು, ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಅಲ್ಲಿನ ನಿವಾಸಿಗಳಿಗೆ ಉಪಹಾರ ಉಣ ಬಡಿಸಿದರು. ಈ ವೇಳೆ ಪತ್ರಕರ್ತರೊಂದಿಗೆ ಮಾತ ನಾಡಿ, ಕಳೆದ 40 ವರ್ಷಗಳಿಂದ ಸಮಸ್ಯೆಯಾಗಿದ್ದ ರಸ್ತೆ  ಒತ್ತುವರಿ ಪರಿಹಾರ ಕಾರ್ಯವನ್ನು ಬಗೆಹರಿಸಲಾಗಿದ್ದು ಶೀಘ್ರದಲ್ಲೇ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸುವುದಾಗಿ ಹೇಳಿದರು.

error: Content is protected !!