ಅಕ್ಕಿ ವರ್ತಕರಾದ ಕಿತ್ತೂರು ಜಯಣ್ಣ ಅವರ ಪುತ್ರ ಚಿ|| ಕೆ.ಜೆ. ಬಸವಂತ ಕುಮಾರ್ ಅವರು ದಿನಾಂಕ 23.10.2023ರ ಸೋಮವಾರ ಸಂಜೆ 6 ಗಂಟೆಗೆ ನಿಧನರಾದರು. ಮೃತರಿಗೆ ಸುಮಾರು 30 ವರ್ಷ ವಯಸ್ಸಾಗಿತ್ತು. ತಂದೆ, ಇಬ್ಬರು ಸಹೋದರಿಯರು, ಮಾವಂದಿರು ಸೇರಿದಂತೆ, ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 24.10.2023ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಮೃತರ ಸ್ವಗ್ರಾಮ ಜಗಳೂರು ತಾಲ್ಲೂಕಿನ ಉದ್ದಗಟ್ಟ ಗ್ರಾಮದಲ್ಲಿರುವ ಅವರ ಸ್ವಂತ ತೋಟದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಕೆ.ಜೆ. ಬಸವಂತ ಕುಮಾರ್
![basavanthkumar ಕೆ.ಜೆ. ಬಸವಂತ ಕುಮಾರ್](https://janathavani.com/wp-content/uploads/2023/10/basavanthkumar-.jpg)