ಸ್ವಗ್ರಾಮದಲ್ಲಿ ಜಗಳೂರು ಶಾಸಕ ದೇವೇಂದ್ರಪ್ಪ ಅವರಿಗೆ ಅದ್ಧೂರಿ ಸನ್ಮಾನ

ಸ್ವಗ್ರಾಮದಲ್ಲಿ ಜಗಳೂರು ಶಾಸಕ  ದೇವೇಂದ್ರಪ್ಪ ಅವರಿಗೆ ಅದ್ಧೂರಿ ಸನ್ಮಾನ

ಜಗಳೂರು, ಅ. 19 – ಹುಟ್ಟೂರು ಚಿಕ್ಕಮ್ಮನ ಹಟ್ಟಿಯನ್ನು ಓದು, ಸಾಮರಸ್ಯತೆಯಲ್ಲಿ ದೊಡ್ಡಮ್ಮನಹಟ್ಟಿ ಗ್ರಾಮವನ್ನಾಗಿಸುವೆ ಪಕ್ಷಾತೀತವಾಗಿ ಸರ್ವರೂ ಕೈಜೋಡಿಸಿ ಎಂದು ಶಾಸಕ‌‌ ಬಿ. ದೇವೇಂದ್ರಪ್ಪ ಕರೆ‌ ನೀಡಿದರು.

ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ನೂತನ ನ್ಯಾಯಬೆಲೆ ಅಂಗಡಿ ಹಾಗೂ ವ್ಯಾಯಾಮ ಶಾಲೆಯನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಸೂಕ್ತ‌ ಸಾರಿಗೆ ವ್ಯವಸ್ಥೆಯೂ ಇಲ್ಲದ ಚಿಕ್ಕಮ್ಮನಹಟ್ಟಿ ಫಲಾನುಭವಿಗಳು ದಿನವಿಡೀ ತಮ್ಮ ವೈಯಕ್ತಿಕ ಕೆಲಸ ಬದಿಗೊತ್ತಿ ಪಡಿತರ ದಾಸ್ತಾನು ಪಡೆಯಲು ಪಕ್ಕದ ಕಣ್ವಕುಪ್ಪೆ ಗ್ರಾಮಕ್ಕೆ‌ ತೆರಳಬೇಕಿತ್ತು. ದಶಕಗಳ‌‌ ಕನಸಿನ ನ್ಯಾಯಬೆಲೆ‌ ಅಂಗಡಿ ಇಂದು‌ ನನ್ನ ಆಡಳಿತಾವಧಿಯಲ್ಲಿ  ಆರಂಭವಾಗಿರುವುದು ಸಂತಸ ತಂದಿದೆ ಎಂದರು.

ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕ ಗ್ರಾಮದಲ್ಲಿ ನೆಲೆಸಿರುವ ನಾಲ್ಕು ದೇವರುಗಳ ಅನುಗ್ರಹದಿಂದ ಗೆಲುವು ಸಾಧಿಸಿದರೂ  ನನ್ನ‌ ಮೇಲೆ ಸ್ವಗ್ರಾಮದವರಿಗೇಕೆ‌ ತಾತ್ಸಾರ ಅಸೂಯೆ ಎಂಬುದು ನೋವು ತಂದಿತ್ತು. ಆದರೆ ಇಂದಿನ ಕಾರ್ಯಕ್ರಮಕ್ಕೆ ಅದ್ದೂರಿ‌ ಸ್ವಾಗತದ ಅಭಿಮಾನಕ್ಕೆ‌ ನನ್ನ ನೋವಿಗೆ ತೆರೆ ಬಿದ್ದು ಹರ್ಷ ತಂದಿದೆ. ಗ್ರಾಮಸ್ಥರ ಬೇಡಿಕೆಯಂತೆ ಶಾಲಾ‌ ಕಾಂಪೌಂಡ್, ಪಶು ಆಸ್ಪತ್ರೆ, ಪ್ರೌಢ ಶಾಲೆ, ರಸ್ತೆ ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ದಿಗೆ ಬದ್ದನಾಗಿರುವೆ ತಮ್ಮ‌ ಸಹಕಾರ ಮುಖ್ಯ ಎಂದರು.

ಕೌಟುಂಬಿಕ ಕಷ್ಟದ ಜೀವನ  ಸ್ಮರಿಸಿ ಭಾವುಕರಾದರು : ಕಡು ಬಡತನದಲ್ಲಿ‌ ಜನಿಸಿ ವಿದ್ಯಾಭ್ಯಾಸ ಮಾಡುವಾಗ ತುತ್ತು ಕೂಳಿಗೂ ಕಷ್ಟ ಪಡುತ್ತಿರುವಾಗ ಗ್ರಾಮದ ಸಹೋದರ ಸಮಾಜ ದವರಾದ ರಂಗಯ್ಯ, ಇಮ್ಮಡಾಪುರ, ಮನೆತನದ ವರು, ಚಿಕ್ಕ ವೀರಣ್ಣ, ಕಾಟಪ್ಪ, ಪಾರ್ವತಕ್ಕ, ಗೆಳೆಯ ಪಾಪಲಿಂಗಪ್ಪ ತಾಯಿ, ಪ್ರತಿಯೊಬ್ಬರೂ ಮರುಕದಿಂದ  ಅನ್ನವಿಕ್ಕಿದ್ದನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದು ಶಾಸಕರು ಭಾವುಕರಾದರು. ಗ್ರಾಮದಲ್ಲಿ ಯಾದವ ಸಮಾಜದ ಪೋಳಿ ದೇವಸ್ಥಾನವನ್ನು ಸರ್ಕಾರದ ಅನುದಾನ ಹಾಗೂ ವೈಯಕ್ತಿಕ ಸಹಾಯದಿಂದ  ಅಭಿವೃದ್ದಿ ಪಡಿಸುವೆ. ಮೂರು ಗ್ರಾಮ ಸಮಿತಿ ರಚಿಸಿ ಧಾರ್ಮಿಕ ಸಭೆ ಆಯೋಜಿಸುವೆ. ವಿಶಿಷ್ಟ ಬುಡಕಟ್ಟು  ಸಂಪ್ರದಾಯದಿಂದ ದೈವ ಆರಾಧಿಸಿ ಕೃಪೆಗೆ ಪಾತ್ರರಾಗೋಣ ಎಂದು ಹೇಳಿದರು.

ತಹಶೀಲ್ದಾರ್ ಸಯ್ಯದ್ ಖಲೀಮುಲ್ಲಾ ಮಾತನಾಡಿ, ಪ್ರಸಕ್ತವಾಗಿ ನ್ಯಾಯಬೆಲೆ‌ ಅಂಗಡಿಗೆ ಅನುಮತಿ ದೊರೆಯಲು ಇಲಾಖೆಯಿಂದ ಹಲವು  ಮಾನದಂಡಗಳಿವೆ. ಅದರಲ್ಲಿ ಸಂಘ – ಸಂಸ್ಥೆ ಪ್ರತಿನಿಧಿಗಳಿಗೆ, ವಿಕಲಚೇತನರಿಗೆ ಮೊದಲ ಆದ್ಯತೆಯಿದೆ. ಶಾಸಕರ ಸ್ವಗ್ರಾಮದಲ್ಲಿ ವಿಕಲಚೇತನ ವ್ಯಕ್ತಿಗೆ ನ್ಯಾಯಬೆಲೆ‌ ಅಂಗಡಿ ಮಂಜೂರಾಗಿ ಉದ್ಘಾಟನೆಯಾಗಿರುವುದು ಸೌಭಾಗ್ಯವಾಗಿದೆ. ಗ್ರಾಮದಲ್ಲಿ 344 ಪಡಿತರ ಚೀಟಿಯ ಫಲಾನುಭವಿಗಳಿದ್ದು, ಸರ್ಕಾರ ಒದಗಿಸುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಯಾದವ, ವಾಲ್ಮೀಕಿ, ಹರಿಜನ, ಸಮುದಾಯಗಳ ಹಟ್ಟಿಗಳಲ್ಲಿ ಸಂಚರಿಸಿದ  ಮೆರವಣಿಗೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ  ಗ್ರಾಮದ ಮಹಿಳೆಯರು, ಮಕ್ಕಳು, ಗ್ರಾಮಸ್ಥರಿಂದ ಪುಷ್ಪಾರ್ಚನೆ, ಆರತಿ ಬೆಳಗಿ, ಪಟಾಕಿ‌ ಸಿಡಿಸಿ ಸ್ವಗ್ರಾಮದ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ನ್ಯಾಯಬೆಲೆ‌ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಓಮಣ್ಣ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಗ್ರಾ.ಪಂ‌. ಉಪಾಧ್ಯಕ್ಷೆ ಸುಧಾಮಣಿ, ಗ್ರಾ.ಪಂ‌ ಸದಸ್ಯ ಮಂಜಣ್ಣ, ಮುಖಂಡರಾದ  ಓಮಣ್ಣ, ಕೃಷ್ಣಪ್ಪ, ಎಸ್.ಕಾಟಪ್ಪ, ಮಾರಪ್ಪ, ತಮಲೇಹಳ್ಳಿ ಗುರುಮೂರ್ತಿ, ಪುಟ್ಟಣ್ಣ, ಅಹಮ್ಮದ್ ಅಲಿ, ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಪೀರ್, ರಂಗಪ್ಪ,ಪಿಡಿಓ ವಾಸುದೇವ, ಪಾಪಲಿಂಗಪ್ಪ, ಎಇಇ ಚಂದ್ರಶೇಖರ್, ಜಗಳೂರಯ್ಯ, ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!