ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಪ್ರಯುಕ್ತ ಗುರುವಾರ ದಾವಣಗೆರೆಯ ರಾಯರ ಮಠಗಳಲ್ಲಿ ಆರಾಧನೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನಡೆದವು. ಕೆ.ಬಿ. ಬಡಾವಣೆ ಮತ್ತು ಪಿ.ಜೆ. ಬಡಾವಣೆಯಲ್ಲಿರುವ ರಾಯರ ಮಠಗಳಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಕನಕಾಭಿಷೇಕ ಅರ್ಚನೆ ಸೇವೆ ನಡೆಯಿತು. ಆರಾಧನಾ ಮಹೋತ್ಸವದ ಪ್ರಯುಕ್ತ ಮಠಗಳಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆಗಳು ಜರುಗಿದವು. ಕೆ.ಬಿ. ಬಡಾವಣೆ ರಾಯರ ಮಠದಲ್ಲಿ ಬೆಳಿಗ್ಗೆ ಅಭಿಷೇಕ ಹಾಗೂ ನಂತರದ ಪೂಜಾಲಂಕಾರದ ಚಿತ್ರವಿದು.
ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
![01 raghavendra shree01.09.2023 ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ](https://janathavani.com/wp-content/uploads/2023/09/01-raghavendra-shree01.09.2023-860x587.jpg)