ಹರಪನಹಳ್ಳಿ ತಾಲ್ಲೂಕು ಪದವೀಧರ ಕ್ಷೇತ್ರದ ಅಧ್ಯಕ್ಷರಾಗಿ ಬಸವರಾಜ್

ಹರಪನಹಳ್ಳಿ ತಾಲ್ಲೂಕು ಪದವೀಧರ ಕ್ಷೇತ್ರದ  ಅಧ್ಯಕ್ಷರಾಗಿ ಬಸವರಾಜ್

ಹರಪನಹಳ್ಳಿ, ಆ.26- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪದವೀಧರ ಕ್ಷೇತ್ರದ ತಾಲ್ಲೂಕು ಅಧ್ಯಕ್ಷರನ್ನಾಗಿ ಬಸವರಾಜ್ ಹುಲಿಯಪ್ಪನವರ್ ಅವರನ್ನು  ಜಿಲ್ಲಾಧ್ಯಕ್ಷ ಎಮ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಹೆಚ್. ಕೆ., ಉಪಾಧ್ಯಕ್ಷರಾಗಿ ತಿರುಮಲ ಕೋರಿಶೆಟ್ಟಿ ಮತ್ತು ಮೊಹಮದ್ ಭಾಷ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ  ನಿರಂಜನಗೌಡ ಅವರನ್ನು ಆಯ್ಕೆ ಮಾಡಲಾಯಿತು. 

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ವೈ, ವಕೀಲರಾದ ಕಂಡ್ಯಪ್ಪ, ಮೋಹನ್, ಬಸವರಾಜ್, ಅರುಣ್, ಪ್ರಜ್ವಲ್, ನಾಗರಾಜ್, ಮಧು, ಅಣ್ಣಪ್ಪ ಜಿ. ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!