ಅರಸೀಕೆರೆ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ-ಅವೈಜ್ಞಾನಿಕ : ಸಂಸದ ದೇವೇಂದ್ರಪ್ಪ

ಅರಸೀಕೆರೆ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ-ಅವೈಜ್ಞಾನಿಕ : ಸಂಸದ ದೇವೇಂದ್ರಪ್ಪ

ಹರಪನಹಳ್ಳಿ, ಆ.26- ಅರಸೀಕೆರೆ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ ಹಾಗೂ ಅವೈಜ್ಞಾನಿಕವಾಗಿದೆ ಎಂದು ಸಂಸದ ವೈ.ದೇವೇಂದ್ರಪ್ಪ  ತಾಲ್ಲೂಕಿನ ಅರಸೀಕೆರೆ ಗ್ರಾಮದ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿ ನಂತರ ಮಾತನಾಡಿ ಬಸ್ ನಿಲ್ದಾಣ, ಕರೆಂಟ್ ಆಫೀಸ್, ರಸ್ತೆ ಅಗಲೀಕರಣ, ಅರಸೀಕೆರೆ – ಉಚ್ಚಂಗಿದುರ್ಗ ರಸ್ತೆ ಮಧ್ಯೆದಲ್ಲಿರುವ ಸೇತುವೆ ಕುಸಿದಿದೆ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ.

ಕಾಮಗಾರಿ ಪ್ರಾರಂಭವಾಗಿ 2 ವರ್ಷಗಳಾದರೂ ಕಾಮಗಾರಿ ವಿಳಂಬವಾಗಿದೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಕೂಡಲೇ ಕಾಮಗಾರಿ ಸರಿಪಡಿಸಿ, ಸಂಪೂರ್ಣಗೊಳಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ. ಇನಾಯತ್ ಉಲ್ಲಾ, ಮುಖಂಡರಾದ ಪೂಜಾರ್ ಮರಿಯಪ್ಪ, ಎ. ಮಹಾಬ್ದುಲ್ ಸಾಬ್, ಎ.ಹೆಚ್. ಪಂಪಣ್ಣ, ವೈ.ಟಿ. ಕೊಟ್ರೇಶ್, ಬಷೀರ್ ಸಾಬ್, ಮುನ್ನ ಸಾಬ್, ವೆಂಕೋಬ ಶೆಟ್ರು, ಇಂಜಿನಿಯರ್‌ಗಳಾದ ನಾಗರಾಜ್ ಎ.ಇ.ಇ., ನಿರಂಜನ್, ಸರುಉಲ್ಲಾ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

error: Content is protected !!