ಹರಿಹರ : ರಾಜ ರಾಜೇಶ್ವರಿ ವಿದ್ಯಾರ್ಥಿನಿಯರಿಗೆ ಬಹುಮಾನ

ಹರಿಹರ : ರಾಜ ರಾಜೇಶ್ವರಿ ವಿದ್ಯಾರ್ಥಿನಿಯರಿಗೆ ಬಹುಮಾನ

 ಹರಿಹರ,ಆ.21-  ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಲೇಬೆನ್ನೂರು ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು  ಗಾಂಧಿ ಮೈದಾನದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ  ಶಾಸಕ ಬಿ.ಪಿ. ಹರೀಶ್ ಅವರಿಂದ ಬಹುಮಾನ ಸ್ವೀಕರಿಸಿದರು . 

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಕು. ತೇಜಸ್ವಿನಿ ಹಾಗೂ  ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುವ ಕೃಪಾ ಪಾಟೀಲ್ ಅವರಿಗೆ ಶಾಸಕರು ಬಹುಮಾನ ಹಾಗೂ ಅಭಿನಂದನಾ ಪತ್ರ ವಿತರಿಸಿದರು . 

ವಿಜೇತ ವಿದ್ಯಾರ್ಥಿನಿಯರನ್ನು  ರಾಜ ರಾಜೇಶ್ವರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ  ಜಿ .ಬಿ. ಶಿವಾನಂದಪ್ಪ ,  ಪ್ರಾಂಶುಪಾಲರಾದ ಜಿ. ಒ. ಸುಜಾತ, ಮುಖ್ಯೋಪಾಧ್ಯಾಯ  ಶಶಿಧರ್. ಎಸ್ ಶಿಗ್ಗಾಂವ್‌ಕರ್, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು  ಅಭಿನಂದಿಸಿದ್ದಾರೆ.

error: Content is protected !!