ಡಾ. ಮಲ್ಲಿಕಾರ್ಜುನ ವಿ.ಜೆ. ಅವರಿಗೆ `ವೈದ್ಯ ರತ್ನಾಕರ’ ಬಿರುದು ಪ್ರದಾನ
ಶ್ರೀ ಅಭಿನವ ರೇಣುಕ ಮಂದಿರ ದಲ್ಲಿ ನಡೆಯುತ್ತಿರುವ ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 25ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮೋತ್ತೇಜಕ ಕಾರ್ಯಕ್ರಮದಲ್ಲಿ ಇಂದಿನ ಸಮಾರಂಭದ ವಿವರ. ಇಂದು ಸಂಜೆ 6.30ಕ್ಕೆ ಏರ್ಪಾಡಾಗಿರುವ ಧರ್ಮೋತ್ತೇಜಕ ಸಮಾರಂಭದ ನೇತೃತ್ವವನ್ನು ಡಾ. ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು (ಗುರುಪಾದೇಶ್ವರ ಮಠ, ಮರಿಯಮ್ಮನಹಳ್ಳಿ) ವಹಿಸುವರು. ಮಳಲಿ ಮಠ ಸಂಸ್ಥಾನದ ಶ್ರೀ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ (ಶ್ರೀಮದ್ರಂಭಾ ಪುರಿ ಖಾಸಾ ಶಾಖಾ ಸಂಸ್ಥಾನ – ಮಳಲಿ ಮಠ) ಉಪದೇಶಾಮೃತ ನೀಡುವರು.
ಇದೇ ಸಂದರ್ಭದಲ್ಲಿ ಡಾ. ಮಲ್ಲಿಕಾರ್ಜುನ ವಿ.ಜೆ. ಅವರಿಗೆ `ವೈದ್ಯ ರತ್ನಾಕರ’ ಬಿರುದಿನೊಂದಿಗೆ ಗೌರವ ಶ್ರೀರಕ್ಷೆ, ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಜಿಲ್ಲಾ ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆ ಅಧ್ಯಕ್ಷ ದೇವರಮನೆ ಶಿವಕುಮಾರ್, ಶ್ರೀ ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಡಾ. ವೆಂಕಟೇಶ್, ಹರಿಹರ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಮಹಾನಗರ ಪಾಲಿಕೆ ಮಹಾಪೌರ ಬಿ.ಹೆಚ್. ವಿನಾಯಕ, ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣಕುಮಾರ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ, ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜು, ಮಹಾನಗರ ಪಾಲಿಕೆ ಮಾಜಿ ಮಹಾಪೌರ ಬಿ.ಜಿ. ಅಜಯಕುಮಾರ್, ಮಹಾನಗರ ಪಾಲಿಕೆ ಸದಸ್ಯ ಚಮನ್ ಸಾಬ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.