ಹರಿಹರ, ಅ. 11 – ನಗರದ ತುಂಗಭದ್ರಾ ನದಿಯ ಪಕ್ಕದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸ್ವಾಮಿಗಳವರ 352 ನೇ ಆರಾಧನಾ ಮಹೋತ್ಸವವನ್ನು ಇದೇ ದಿನಾಂಕ 31ರ ಗುರುವಾರದಿಂದ 2 ರ ಶನಿವಾರದವರೆಗೆ ಶ್ರೀ ವೃಂದಾವನ ಟ್ರಸ್ಟ್ ವತಿಯಿಂದ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎ.ಬಿ. ಬಸವರಾಜ್, ಕಾರ್ಯದರ್ಶಿ ಸುಕುಮಾರ್, ಖಜಾಂಚಿ ಎಸ್. ರಂಗನಾಥ ತಿಳಿಸಿದ್ದಾರೆ.
ಪ್ರತಿದಿನ ಮುಂಜಾನೆ ವಿವಿಧ ಪೂಜೆಗಳು ಮತ್ತು ಸಾಯಂಕಾಲ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು, ತೊಟ್ಟಿಲು ಸೇವೆ, ಮಹಾಮಂಗಳಾರತಿ ಕಾರ್ಯಗಳು ನಡೆಯಲಿವೆ.