ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ

ವಿವಿಧ ಶಾಲಾ-ಕಾಲೇಜುಗಳಿಗೆ ಶಾಸಕ ವೈ.ಎ.ನಾರಾಯಣ ಸ್ವಾಮಿ ಭೇಟಿ

ದಾವಣಗೆರೆ. ಆ.11- ಶಿಕ್ಷಕರ ಸಮಸ್ಯೆಗಳಿಗೆ ಮೇಲಾಧಿಕಾರಿಗಳು ಕೂಡಲೇ ಸ್ಪಂದಿಸಬೇಕೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಹೇಳಿದರು.   

ನಗರದ ಸೀತಮ್ಮ ಕಾಲೇಜು,  ಸುಂದರಮ್ಮ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಡಯಟ್,  ಮೋತಿ ವೀರಪ್ಪ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರುಗಳ ಕುಂದುಕೊರತೆ ಕೇಳಿದರು.

ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳನ್ನು  ಸಂಪರ್ಕಿಸಿ, ಕೂಡಲೇ  ಶಿಕ್ಷಕರ ಸಮಸ್ಯೆಯನ್ನು  ಬಗೆಹರಿಸು ವಂತೆ ಸೂಚಿಸಿದರು. ಏಳನೇ ವೇತನ ಆಯೋಗ ಜಾರಿ ಮತ್ತು ಎನ್.ಪಿ.ಎಸ್.ಕುರಿತು ಸದನದಲ್ಲಿ ಸರ್ಕಾರದ ಗಮ ನಕ್ಕೆ ತರಲಾಗಿದೆ. ಸರ್ಕಾರ ಏಳನೇ ವೇತನದ ಆಯೋಗದ ಬಗ್ಗೆ ಆರು ತಿಂಗಳು ಕಾಲಾವಕಾಶ ಮಾಡಿಕೊಂಡಿದೆ ಎಂದು ಶಿಕ್ಷಕರಿಗೆ ಹೇಳಿದರು.  

ವೈ.ಎ.ಎನ್ ಬಳಗದ ಜಿಲ್ಲಾ ಸಂಚಾಲಕ ಬಿ. ಎನ್.ರಾಮರೆಡ್ಡಿ, ಮುಬಾರಕ್, ಸಹಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಹೆಚ್.ಸಿ. ಶ್ರೀನಿವಾಸ್, ಮುಖ್ಯೋ ಪಾಧ್ಯಾಯರ ಸಂಘದ ಜಿಲ್ಲಾಧ್ಯ ಕ್ಷರು, ವೈ.ಎ.ಎನ್ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!