ನಗರಕ್ಕೆ ಇಂದು ಕೆಪಿಎ ತಂಡ

ಬೆಂಗಳೂರಿನ ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ತಂಡದ ಪದಾಧಿಕಾರಿಗಳು ರಾಜ್ಯದಾದ್ಯಂತ ಏಕತಾ ಯಾತ್ರೆ, ಡಿಜಿ ಇಮೇಜ್ ಪ್ರಚಾರ ಆಯೋಜಿಸಿರುವ ಕುರಿತು ಚರ್ಚಿಸಲು ಇಂದು ಬೆಳಿಗ್ಗೆ 11 ಕ್ಕೆ   ಶಿವಯೋಗ ಮಂದಿರದ ಹಿಂಭಾಗದ ಜಯದೇವ ಹಾಸ್ಟೆಲ್ ಆವರಣಕ್ಕೆ ಆಗಮಿಸಲಿದ್ದಾರೆ.

ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಪರಮೇಶ್, ಉಪಾಧ್ಯಕ್ಷ ಎಸ್.ಎಸ್.ನಾಗೇಶ್, ಲಕ್ಷ್ಮಣ ರಾವ್, ಖಜಾಂಚಿ ಆರ್.ವಿ.ಶ್ರೀಕಾಂತ್, ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಆರ್.ಎನ್.ಪಾಟೀಲ್, ಗೌರವಾಧ್ಯಕ್ಷ ಸುರಭಿ ಶಿವಮೂರ್ತಿ, ಪ್ರಧಾನ ಕಾರ್ಯ ದರ್ಶಿ ಗಜಾನನ ಭೂತೆ, ಹಿರಿಯ ಛಾಯಾ ಗ್ರಾಹಕ ಎಚ್.ಬಿ.ಮಂಜು ನಾಥ, ದಾವಣಗೆರೆ ತಾಲ್ಲೂಕು ಫೋಟೋ, ವೀಡಿಯೋ ಗ್ರಾಫರ್ಸ್ ಸಂಘದ ಗೌರವಾಧ್ಯಕ್ಷ ಬಿ.ಮಂಜುನಾಥ್, ಅಧ್ಯಕ್ಷ ಎಂ.ಮನು, ಗ್ರಾಮಾಂತರ ವಲಯದ ಅಧ್ಯಕ್ಷ ಕೊಂಡಜ್ಜಿ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಮಲ್ಲೇಶ್‌ ಪಾಟೀಲ್ ಸೇರಿದಂತೆ ಇತರರು ಭಾಗವಹಿಸುವರು. 

error: Content is protected !!