ಜಗಳೂರು: ವಸತಿಶಾಲೆ `ಡಿ’ ಗ್ರೂಪ್ ನೌಕರರನ್ನು ಖಾಯಂಗೊಳಿಸಲು ಮನವಿ

ಜಗಳೂರು: ವಸತಿಶಾಲೆ `ಡಿ’ ಗ್ರೂಪ್ ನೌಕರರನ್ನು ಖಾಯಂಗೊಳಿಸಲು ಮನವಿ

ಜಗಳೂರು, ಆ.10- ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆಗೈಯ್ಯುತ್ತಿರುವ ಹೊರಗುತ್ತಿಗೆ `ಡಿ’ ಗ್ರೂಪ್ ನೌಕರ ರನ್ನು ಖಾಯಂಗೊಳಿಸಲು ಒತ್ತಾಯಿಸಿ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ನೌಕರರು ಮನವಿ ಸಲ್ಲಿಸಿದರು.

ಪಟ್ಟಣದ ಶಾಸಕರ ನಿವಾಸದಲ್ಲಿ ಏಕಲವ್ಯ, ಅಂಬೇಡ್ಕರ್, ಮೊರಾರ್ಜಿ, ಕಿತ್ತೂರು ರಾಣಿ ವಸತಿ ಶಾಲೆಗಳಲ್ಲಿ ಸೇವೆಗೈಯ್ಯುತ್ತಿರುವ `ಡಿ’ ಗ್ರೂಪ್ ನೌಕರರು ಸರ್ಕಾರಕ್ಕೆ ಲಿಖಿತ  ಮನವಿ ಸಲ್ಲಿಸಿದರು.

ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ `ಡಿ’ ಗ್ರೂಪ್ ನೌಕರರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ಸುಮಾರು ವರ್ಷಗಳಿಂದ ಯಾವುದೇ ವೃತ್ತಿ ಭದ್ರತೆ ಯಿಲ್ಲದೆ ವಸತಿ ಶಾಲೆ ಮಕ್ಕಳ ಸೇವೆಯಲ್ಲಿ ತೊಡಗಿದ್ದು‌, ಖಾಯಂ ಗೊಳಿಸಲು ಆಗಸ್ಟ್ 15 ರಂದು ನಡೆಯಲಿರುವ ಸಭೆಯಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತ ನಾಡಿದ  ಶಾಸಕ ಬಿ.ದೇವೇಂ ದ್ರಪ್ಪ  ಸರ್ಕಾರದ ಮಟ್ಟದಲ್ಲಿ ತಮ್ಮ ಬೇಡಿಕೆಗಳನ್ನು ಚರ್ಚಿಸಲಾಗುವುದು. ಕ್ರೈಸ್ ನಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳ ಉನ್ನತೀಕರಣಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ `ಡಿ’ ಗ್ರೂಪ್ ನೌಕರರ ಸಂಘದ ಪದಾಧಿಕಾರಿಗಳಾದ  ಶೇಖರಪ್ಪ, ದುರುಗೇಶ್, ಸಂತೋಷ್, ಮಣಿಕಂಠ, ಶಮಿನಾಬಾನು, ರೇಖಮ್ಮ, ಗೆಲಿಲ್, ಯಲ್ಲಪ್ಪ, ಮೂರ್ತಿ, ತಿಪ್ಪೇಸ್ವಾಮಿ, ನಾಗರಾಜ್, ರಂಗಸ್ವಾಮಿ, ಪರಶುರಾಮ್ ಮತ್ತಿತರರು ಇದ್ದರು.

error: Content is protected !!