ಕೊಮಾರನಹಳ್ಳಿ : ಎಸ್‌ಡಿಎಂಸಿ ಅಧ್ಯಕ್ಷರಾಗಿ ಎಸ್.ಡಿ. ರಂಗನಾಥ್

ಕೊಮಾರನಹಳ್ಳಿ : ಎಸ್‌ಡಿಎಂಸಿ ಅಧ್ಯಕ್ಷರಾಗಿ ಎಸ್.ಡಿ. ರಂಗನಾಥ್

ಮಲೇಬೆನ್ನೂರು, ಆ. 2- ಕೊಮಾರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಎಸ್.ಡಿ. ರಂಗನಾಥ್ ಅವರುಗಳು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಹಾಲಿವಾಣ ಗ್ರಾ.ಪಂ. ಅಧ್ಯಕ್ಷ ಡಿ.ಡಿ. ಚಿಕ್ಕಪ್ಪ, ಗ್ರಾ.ಪಂ. ಸದಸ್ಯರಾದ ಐ.ಪಿ. ರಂಗನಾಥ್, ಮಡಿವಾಳರ ಬಸವರಾಜ್, ಪರಮೇಶ್ವರನಾಯ್ಕ, ಯು. ಪರಮೇಶ್ವರಪ್ಪ, ಹೊಸೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್‌ಕುಮಾರ್, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ, ಸಹ ಶಿಕ್ಷಕರಾದ ನಾಗಮಣಿ, ಗೋಪಿನಾಥ್, ನಜ್ಮಾ, ಹಬಿ ಉನ್ನಿಸಾ ಹಾಗೂ ಪೋಷಕರು ಈ ವೇಳೆ ಹಾಜರಿದ್ದು, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

error: Content is protected !!