ಧೂಳೆಹೊಳೆ : ಇಂದು ಗುರುವಂದನೆ

ಜಿಎಂಸಿಜಿ ಪ್ರೌಢಶಾಲೆಯಲ್ಲಿ ಇದುವರೆಗೂ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಲ್ಲಾ ಶಿಕ್ಷಕರಿಗೆ ಮತ್ತು ಇಂದು ನಿವೃತ್ತಿಯಾಗುತ್ತಿರುವ ಹಿಂದಿ ಭಾಷಾ ಪಂಡಿತರಾದ ಕೆ.ಎಂ.ಗುರುಬಸಯ್ಯ ಅವರಿಗೆ ಗುರುವಂದನಾ ಸಮಾರಂಭವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಶಿಕ್ಷಕ ಡಿ.ಎಂ.ಮಂಜುನಾಥಯ್ಯ ತಿಳಿಸಿದ್ದಾರೆ. ಅಧ್ಯಕ್ಷತೆ : ಎನ್.ಜಿ.ನಾಗನಗೌಡ್ರು, ಮುಖ್ಯ ಅತಿಥಿ : ಟಿ.ಎಂ.ಚಂದ್ರಶೇಖರಯ್ಯ.

error: Content is protected !!