ಜಗಳೂರಿನ ಪಿಎಸ್ಐ ಬಸವರಾಜ್ ನಿವೃತ್ತಿ : ಆತ್ಮೀಯ ಬೀಳ್ಕೊಡುಗೆ

ಜಗಳೂರಿನ ಪಿಎಸ್ಐ ಬಸವರಾಜ್ ನಿವೃತ್ತಿ : ಆತ್ಮೀಯ ಬೀಳ್ಕೊಡುಗೆ

ಜಗಳೂರು, ಜು.30- ನಿವೃತ್ತಿ ಹೊಂದಿದ ಪಿಎಸ್ಐ ಸಿ.ಎನ್. ಬಸವರಾಜು ಅವರಿಗೆ ಪೊಲೀಸ್ ಠಾಣೆಯಲ್ಲಿ ಇಂದು ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ಸನ್ಮಾನಿಸಿ ಮಾತನಾಡಿದ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ರಾವ್, ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಘನತೆಯಿಂದ ನಿವೃತ್ತಿ ಹೊಂದುವುದು ಸವಾಲಿನ ಕೆಲಸವಾಗಿದೆ ಎಂದರು.

ಪಿಎಸ್ಐ ಬಸವರಾಜು ಅವರು 30 ವರ್ಷ ಸುದೀರ್ಘ ಸೇವೆ ಸಲ್ಲಿಸಿ, ಇಲಾಖೆಗೆ ಉತ್ತಮ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುತ್ತಿರುವುದು ಶ್ಲ್ಯಾಘನೀಯ.ಪೊಲೀಸ್ ಇಲಾಖೆಗೆ ಸೇರಿದ ಮೇಲೆ ವೈಯಕ್ತಿಕ ಜೀವನಕ್ಕೆ ಸಮಯ ಕೊಡುವುದು ಕಷ್ಟಸಾಧ್ಯ, ಬಸವರಾಜ್ ಅವರು ಠಾಣೆಗೆ ಸಮಸ್ಯೆ ಎಂದು ಬಂದವರಿಗೆ ಮುಗುಳ್ನಗುತ್ತಲೇ ಉತ್ತರಿಸಿ ಸಮಾಧಾನ ಪಡಿಸಿ ಕೆಲಸ ಮಾಡಿದ್ದಾರೆ  ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜು ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿವೆ. ಕಷ್ಟಗಳು ಬಂದಾಗ ಪೊಲೀಸರು ಹೆದರಬಾರದು, ಆರೋಪಗಳನ್ನು ಎದುರಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಸ್ಐ ಎಸ್.ಡಿ. ಸಾಗರ್, ಎಎಸ್ಐ ನಾಗರಾಜ್, ಸಿಬ್ಬಂದಿಗಳಾದ ಆನಂದ್, ಮಾರುತಿ, ರಮೇಶ್, ನಾಗರಾಜ್, ಶಿವಕುಮಾರ್, ಮಾರಪ್ಪ, ನಾಗಭೂಷಣ್ ಮತ್ತಿತರರು ಹಾಜರಿದ್ದರು.

error: Content is protected !!